Current Affairs 25-01-2022

Jan 27, 2022 12:07 pm By Admin

ಶ್ರೀ ರಾಮಾನುಜಾಚಾರ್ಯರು:

ಸಂದರ್ಭ:

ಫೆಬ್ರವರಿ 5 ರಂದು ಹೈದರಾಬಾದ್‌ನಲ್ಲಿ ‘ಸಮಾನತೆಯ ಪ್ರತಿಮೆ’/ ‘ಸ್ಟ್ಯಾಚು ಆಫ್ ಇಕ್ವಾಲಿಟಿ’ (Statue of Equality) ಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಲಿದ್ದಾರೆ. ಇದು ವಿಶ್ವದ ಎರಡನೇ ಅತಿ ದೊಡ್ಡ ಪ್ರತಿಮೆ ಎಂದು ಹೇಳಲಾಗುತ್ತಿದೆ.

  1. 11 ನೇ ಶತಮಾನದ ಮಹಾನ್ ಸಮಾಜ ಸುಧಾರಕ ಮತ್ತು ಸಂತರಾದ ರಾಮಾನುಜಾಚಾರ್ಯರ 216 ಅಡಿ ಎತ್ತರದ ಈ ಪ್ರತಿಮೆಯು ಕುಳಿತಿರುವ ಭಂಗಿಯಲ್ಲಿದೆ.

ಏನಿದು ಸ್ಟ್ಯಾಚು ಆಫ್ ಇಕ್ವಾಲಿಟಿ?

ಕುಳಿತಿರುವ ಭಂಗಿಯಲ್ಲಿ ನಿರ್ಮಿಸಲಾಗಿರುವ   ಮತ್ತು ವಿಶ್ವದ ಎರಡನೇ ಅತಿ ಎತ್ತರದ ಈ ಪ್ರತಿಮೆಯು, ಪಂಚಲೋಹ ಎಂಬ ಐದು ಲೋಹಗಳಿಂದ ಮಾಡಲ್ಪಟ್ಟಿದೆ – ಅವುಗಳೆಂದರೆ ಬಂಗಾರ, ತಾಮ್ರ, ಬೆಳ್ಳಿ, ಹಿತ್ತಾಳೆ ಮತ್ತು ಸತು.

ದೇವಾಲಯದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾದ ಶ್ರೀ ರಾಮಾನುಜಾಚಾರ್ಯರ ಮತ್ತೊಂದು ವಿಗ್ರಹವನ್ನು 120 ಕೆಜಿ ಚಿನ್ನದಿಂದ ಮಾಡಲಾಗಿದೆ. ರಾಮಾನುಜಾಚಾರ್ಯ ಸ್ವಾಮಿಗಳು 120 ವರ್ಷಗಳ ಕಾಲ ಬದುಕಿದ್ದ ಸ್ಮರಣಾರ್ಥವಾಗಿ ಈ 120 ಕೆಜಿ ತೂಕದ ಚಿನ್ನದ ಮೂರ್ತಿಯನ್ನು ನಿರ್ಮಿಸಲಾಗಿದೆ.

ಶ್ರೀ ರಾಮಾನುಜಾಚಾರ್ಯರ ಕುರಿತು:

  1. ಕ್ರಿ.ಶ 1017 ರಲ್ಲಿ ತಮಿಳುನಾಡಿನಲ್ಲಿ ಜನಿಸಿದರು.
  2. ಅವರನ್ನು ಶ್ರೀ ವೈಷ್ಣವ ಪಂಥದ ಅತ್ಯಂತ ಗೌರವಾನ್ವಿತ ಆಚಾರ್ಯರು ಎಂದು ಪರಿಗಣಿಸಲಾಗಿದೆ.
  3. ಅವರನ್ನು ಇಳಯ ಪೆರುಮಾಳ್ (Ilaya Perumal) ಎಂದೂ ಕರೆಯುತ್ತಾರೆ, ಅಂದರೆ ಬೆಳಕು / ವಿಕಿರಣ ಎಂದರ್ಥ.
  4. ದೈವಿಕತೆಯ ಕುರಿತು ಅವರ ತತ್ವಶಾಸ್ತ್ರೀಯ ಅಂಶಗಳ ಅಡಿಪಾಯವು ಭಕ್ತಿ ಚಳವಳಿಯ ಮೇಲೆ ಆಳವಾದ ಪ್ರಭಾವ ಬೀರಿತು.
  5. ಅವರು ವೇದಾಂತ ತತ್ವಶಾಸ್ತ್ರ ಸಂಪ್ರದಾಯದಲ್ಲಿ ‘ವಿಶಿಷ್ಟಾದ್ವೈತ’ ಸಿದ್ಧಾಂತದ ಉಗಮಕಾರರಾಗಿ ಪ್ರಸಿದ್ಧರಾಗಿದ್ದಾರೆ.
  6. ಅವರು ವೇದಾಂತ ತತ್ವಶಾಸ್ತ್ರ ಸಂಪ್ರದಾಯದಲ್ಲಿ ‘ವಿಶಿಷ್ಟಾದ್ವೈತ’ ಸಿದ್ಧಾಂತದ ಪ್ರಮುಖ ಪ್ರತಿಪಾದಕರಾಗಿ ಪ್ರಸಿದ್ಧರಾಗಿದ್ದಾರೆ.
  7. ಅವರು ಪ್ರಮುಖವಾಗಿ ಭಗವದ್ಗೀತೆ ಮತ್ತು ಬ್ರಹ್ಮ ಸೂತ್ರ ಗಳ ಮೇಲೆ ಭಾಷ್ಯಗಳನ್ನು (ವಿಮರ್ಶೆ) ಸಂಸ್ಕೃತ ಭಾಷೆಯಲ್ಲಿ ಬರೆದಿದ್ದಾರೆ.

ವಿಶಿಷ್ಟಾದ್ವೈತ ಸಿದ್ಧಾಂತ ಎಂದರೇನು?

  1. ಇದು ವೇದಾಂತ ತತ್ತ್ವಶಾಸ್ತ್ರದ ಏಕದೇವತಾವಾದಿ ಸಂಪ್ರದಾಯವಾಗಿದೆ. ಇದು ಸರ್ವವ್ಯಾಪಿ ಸರ್ವೋತ್ತಮ ಜೀವಿಗಳ ಏಕದೇವೋಪಾಸನೆ, ಇದರಲ್ಲಿ ಬ್ರಹ್ಮನ್ ಮಾತ್ರ ಅಸ್ತಿತ್ವದಲ್ಲಿದೆ ಎಂದು ನಂಬಲಾಗಿದೆ, ಆದರೆ ಇದು ವಿವಿಧ ರೂಪಗಳಲ್ಲಿ ವ್ಯಕ್ತವಾಗುತ್ತದೆ.
  2. ಇದನ್ನು ಸೀಮಿತ ವೇದಾಂತ, ಅಥವಾ ಎಲ್ಲ ವ್ಯಾಪಕವಾದ ಏಕದೇವೋಪಾಸನೆ, ಅಥವಾ ಅರ್ಹ ದ್ವಿ-ಅಲ್ಲದ (ಜೀವಾತ್ಮ ಮತ್ತು ಪರಮಾತ್ಮ ಎರೆಡೂ ಬೇರೆಯಲ್ಲ) ಅಥವಾ ಸದ್ಗುಣ ಏಕದೇವೋಪಾಸನೆ ಎಂದೂ ವಿವರಿಸಲಾಗಿದೆ.
  3. ವೇದಾಂತ ತತ್ತ್ವಶಾಸ್ತ್ರದ ಈ ಸಂಪ್ರದಾಯವು ಇಡೀ ಪ್ರಪಂಚದ ವೈವಿಧ್ಯತೆ ಅಥವಾ ಬಹುರೂಪತೆಯು ಮೂಲಭೂತವಾದ ಒಂದೇ ಶಕ್ತಿಯ ಅಧೀನದಲ್ಲಿದೆ ಎಂದು ಹೇಳುತ್ತದೆ.