Current Affairs 26-01-2022.

ಮೀಸಲಾತಿಯಲ್ಲಿ 50% ಮಿತಿ:
(50% Reservation Limit)
ಸಂದರ್ಭ:
ಇತ್ತೀಚೆಗೆ, ಕೇಂದ್ರ ಲೋಕಸೇವಾ ಆಯೋಗದ (UPSC) ಆಕಾಂಕ್ಷಿಯೊಬ್ಬರು ಸೆಪ್ಟೆಂಬರ್ 24, 2021 ರಂದು ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (UPSC) ಘೋಷಿಸಿದ ‘ನಾಗರಿಕ ಸೇವೆಗಳ ಪರೀಕ್ಷೆ 2020’ ರ ಅಂತಿಮ ಫಲಿತಾಂಶವನ್ನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ, ಕಾರಣ UPSC ಯ ಅಂತಿಮ ಫಲಿತಾಂಶವು 50% ಮೀಸಲಾತಿ ಮಿತಿಯನ್ನು ಉಲ್ಲಂಘಿಸುತ್ತದೆ ಎಂದು ಅವರು ಅರ್ಜಿಯಲ್ಲಿ ಕೋರಿದ್ದಾರೆ.
ಏನಿದು ಪ್ರಕರಣ?
ಅರ್ಜಿದಾರರು, ‘ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್’ ತನ್ನ ಘೋಷಿತ ಫಲಿತಾಂಶದಲ್ಲಿ 34.55% ಸಾಮಾನ್ಯ ವರ್ಗದ ಅಭ್ಯರ್ಥಿಗಳು ಮತ್ತು 65.44% ಮೀಸಲು ವರ್ಗದ ಅಭ್ಯರ್ಥಿಗಳನ್ನು ನಾಗರಿಕ ಸೇವೆಗಳಲ್ಲಿ ನೇಮಕ ಮಾಡಲು ಶಿಫಾರಸು ಮಾಡಿದೆ, ಇದು ಸಾಮಾನ್ಯವರ್ಗದ ಅಭ್ಯರ್ಥಿಗಳ ಅರ್ಹತೆಯ ಮೇಲೆ ಸಂಪೂರ್ಣವಾಗಿ ಪರಿಣಾಮ ಬೀರುತ್ತದೆ ಎಂದು ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ.
ಈ ನಿಟ್ಟಿನಲ್ಲಿ ಮತ್ತಷ್ಟು ವಾದಿಸಲಾಗಿದ್ದು, ನೇಮಕಾತಿಗಳಿಗಾಗಿ ‘ಸಾಮಾನ್ಯ ಕಾಯ್ದಿರಿಸದ ಕೋಟಾ’ ಅಡಿಯಲ್ಲಿ ಕೇವಲ 40% ಸೀಟುಗಳನ್ನು ಮಾತ್ರ ಮೀಸಲಿಡಲಾಗಿದೆ,ಇದು ಇಂದ್ರಾ ಸಾಹ್ನಿ vs ಯೂನಿಯನ್ ಆಫ್ ಇಂಡಿಯಾ ಪ್ರಕರಣ, 1992 ರಲ್ಲಿ ಸೂಚಿಸಲಾದ 50% ಮೀಸಲಾತಿ ಮಿತಿಯನ್ನು ಉಲ್ಲಂಘಿಸುತ್ತದೆ.
ಇಂದ್ರ ಸಾಹ್ನಿ ಮತ್ತು ಇತರರು vs ಯೂನಿಯನ್ ಆಫ್ ಇಂಡಿಯಾ, 1992 ಪ್ರಕರಣ:
(Indra Sawhney & Others vs Union of India, 1992)
1992 ರ ಇಂದಿರಾ ಸಾಹ್ನಿ ಪ್ರಕರಣದಲ್ಲಿ (ಸಾಮಾನ್ಯವಾಗಿ ಮಂಡಲ್ ಆಯೋಗದ ಪ್ರಕರಣ ಎಂದು ಕರೆಯಲಾಗುತ್ತದೆ), ಸುಪ್ರೀಂ ಕೋರ್ಟ್ನ ಒಂಬತ್ತು ನ್ಯಾಯಾಧೀಶರ ಪೀಠವು ಒಟ್ಟು ಮೀಸಲಾತಿಯಲ್ಲಿ 50% ಮಿತಿಯನ್ನು ವಿಧಿಸಿತು.
- ಈ ಪ್ರಕರಣದಲ್ಲಿ ಹಿಂದುಳಿದ ವರ್ಗಗಳಿಗೆ 27% ಮೀಸಲಾತಿಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್, ‘ಮೇಲ್ಜಾತಿಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ’ 10% ಸರ್ಕಾರಿ ಉದ್ಯೋಗಗಳನ್ನು ಮೀಸಲಿಡುವ ಸರ್ಕಾರಿ ಅಧಿಸೂಚನೆಯನ್ನು ರದ್ದುಗೊಳಿಸಿತು.
- ಅದೇ ಪ್ರಕರಣದಲ್ಲಿ, ಮೀಸಲಾತಿ ಫಲಾನುಭವಿಗಳ ಸಂಖ್ಯೆಯು ಭಾರತದ ಜನಸಂಖ್ಯೆಯ 50% ಕ್ಕಿಂತ ಹೆಚ್ಚಿರಬಾರದು ಎಂಬ ತತ್ವವನ್ನು ಸುಪ್ರೀಂ ಕೋರ್ಟ್ ಅದೇ ಪ್ರಕರಣದಲ್ಲಿ ಎತ್ತಿಹಿಡಿದಿದೆ.
- ಈ ನಿರ್ಧಾರ ಮತ್ತು ನಿಬಂಧನೆಯ ಮೂಲಕ ‘ಕೆನೆಪದರ’ ಪರಿಕಲ್ಪನೆಯನ್ನು ಬಲಪಡಿಸಲಾಯಿತು, ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಆರಂಭಿಕ ನೇಮಕಾತಿಗಳಿಗೆ ಮಾತ್ರ ಸೀಮಿತಗೊಳಿಸಬೇಕು ಮತ್ತು ‘ಬಡ್ತಿ’ಯಲ್ಲಿ ಈ ಪ್ರಯೋಜನಗಳನ್ನು ನೀಡಬಾರದು ಎಂದು ಸ್ಪಷ್ಟಪಡಿಸಲಾಯಿತು.
50% ಮಿತಿಗೆ ಕಾರಣ:
1931 ರ ಜನಗಣತಿಯ ಸಮಯದಲ್ಲಿ ಭಾರತದಲ್ಲಿ ಕೊನೆಯ ಬಾರಿಗೆ ಜಾತಿಗಳನ್ನು ಎಣಿಸಲಾಯಿತು, ಇದರ ಆಧಾರದ ಮೇಲೆ, ‘ಇತರ ಹಿಂದುಳಿದ ವರ್ಗಗಳನ್ನು’ ಮಂಡಲ್ ಆಯೋಗವು ಗುರುತಿಸಿತು. ಈ ಜನಗಣತಿಯ ಪ್ರಕಾರ, ‘ಇತರ ಹಿಂದುಳಿದ ವರ್ಗಗಳ’ ಜನಸಂಖ್ಯೆಯು ದೇಶದ ಒಟ್ಟು ಜನಸಂಖ್ಯೆಯ 52% ಆಗಿತ್ತು. ಆದಾಗ್ಯೂ, ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಮೀಸಲಾತಿಯನ್ನು ಸಮರ್ಥಿಸುತ್ತದೆ ಮತ್ತು ಅದಕ್ಕಾಗಿ ಒಂದು ಮಿತಿಯನ್ನು ನಿಗದಿಪಡಿಸಬೇಕು ಎಂದು ಹೇಳಿದೆ, ಆದರೆ ತೀರ್ಪು ನೀಡುವಾಗ ಜನಸಂಖ್ಯೆಯ ಪ್ರಶ್ನೆಯನ್ನು ಪರಿಗಣಿಸಲಿಲ್ಲ.
ತಮಿಳುನಾಡು ಪ್ರಕರಣ:
ರಾಜ್ಯ ವಿಧಾನಸಭೆಯು ‘ತಮಿಳುನಾಡು ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು (ಶಿಕ್ಷಣ ಸಂಸ್ಥೆಗಳಲ್ಲಿ ಸ್ಥಾನಗಳ ಮೀಸಲಾತಿ ಮತ್ತು ರಾಜ್ಯ ಸೇವೆಗಳಲ್ಲಿ ನೇಮಕಾತಿ ಅಥವಾ ಹುದ್ದೆಗಳು) ಕಾಯ್ದೆ 1993 ಅನ್ನು ಅಂಗೀಕರಿಸಿತು.
- ನಂತರ, 1994 ರಲ್ಲಿ ಸಂಸತ್ತು ಅಂಗೀಕರಿಸಿದ 76 ನೇ ಸಾಂವಿಧಾನ ತಿದ್ದುಪಡಿ ಕಾಯ್ದೆಯ ಮೂಲಕ ಈ ಕಾನೂನನ್ನು ಸಂವಿಧಾನದ ಒಂಬತ್ತನೇ ಅನುಸೂಚಿಯಲ್ಲಿ ಸೇರಿಸಲಾಯಿತು.