HISTORY OF CHIKAPALAPURA IN KANNAD

May 05, 2022 03:46 pm By Admin

ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಜಿಲ್ಲೆಯು ಬೆಂಗಳೂರಿನಿಂದ ಉತ್ತರಕ್ಕೆ 60 ಕಿ.ಮೀ ದೂರದಲ್ಲಿದೆ. ನಂದಿ ಬೆಟ್ಟ, ಭೋಗನಂದೀಶ್ವರ ದೇವಸ್ಥಾನ, ಗುಡಿಬಂಡೆ, ಸ್ಕಂದಗಿರಿ ಚಾರಣ ಮತ್ತು ಕೈವಾರಗಳಿಗೆ ಹೆಸರುವಾಸಿಯಾಗಿದೆ. ರಾಜ್ಯ ರಾಜಧಾನಿಯ ಸಾಮೀಪ್ಯದಿಂದಾಗಿ, ಚಿಕ್ಕಬಳ್ಳಾಪುರದಲ್ಲಿನ ಆಕರ್ಷಣೆಗಳು ಬೆಂಗಳೂರಿನ ನಿವಾಸಿಗಳಿಗೆ ನೆಚ್ಚಿನ ವಾರಾಂತ್ಯದ ರಜಾ ತಾಣಗಳಾಗಿವೆ.

ಕೋಲಾರ ಜಿಲ್ಲೆಯಿಂದ 6 ತಾಲ್ಲೂಕುಗಳನ್ನು ಬೇರ್ಪಡಿಸುವ ಮೂಲಕ 2007 ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ರಚನೆಯಾಯಿತು. ಭಾರತದ ಅತ್ಯಂತ ಗೌರವಾನ್ವಿತ ಎಂಜಿನಿಯರ್ ಮತ್ತು ಮೈಸೂರಿನ ಮಾಜಿ ದಿವಾನ್ ಸರ್ ಎಂ ವಿಶ್ವೇಶ್ವರಯ್ಯ ಅವರು ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ ಜನಿಸಿದರು. ಅವರ ಜನ್ಮಸ್ಥಳ ಈಗ ಸ್ಮಾರಕ ಮತ್ತು ವಸ್ತುಸಂಗ್ರಹಾಲಯವಾಗಿದೆ.

ಪ್ರವಾಸಿ ಆಕರ್ಷಣೆಗಳು
  • ನಂದಿ ಬೆಟ್ಟ: ನಂದಿ ಬೆಟ್ಟ ಬೆಂಗಳೂರಿನಿಂದ ಅತ್ಯಂತ ಜನಪ್ರಿಯವಾದ ಸ್ಥಳವಾಗಿದೆ. ತಂಪಾದ ಗಾಳಿ, ರಮಣೀಯ ದೃಶ್ಯ, ಟಿಪ್ಪು ಡ್ರಾಪ್, ಉದ್ಯಾನ, ದೇವಸ್ಥಾನ ಮತ್ತಿತರ ಕಾರಣಗಳಿಂದಾಗಿ ನಗರವಾಸಿಗಳನ್ನು ಕೈಬೀಸಿ ಕರೆಯುತ್ತದೆ.  
  • ಗುಡಿಬಂಡೆ: ಗುಡಿಬಂಡೆ ಬೆಂಗಳೂರಿನ ಹೊರವಲಯದಲ್ಲಿರುವ ಒಂದು ಸುಂದರ ತಾಣವಾಗಿದೆ, ಇದು ಕಲ್ಲಿನ ಕೋಟೆ, ಅದ್ಭುತ ನೋಟಗಳು ಮತ್ತು ಇತಿಹಾಸಕ್ಕೆ ಹೆಸರುವಾಸಿಯಾಗಿದೆ. ಗುಡಿಬಂಡೆ 17 ನೇ ಶತಮಾನದ ಕೋಟೆಯಾಗಿದ್ದು ಸ್ಥಳೀಯ ಆಡಳಿತಗಾರ ಬೈರೆ ಗೌಡ ನಿರ್ಮಿಸಿದ.
  • ಬೈರಸಾಗರ ಸರೋವರ: ಗುಡಿಬಂಡೆಯ ಕೆಳಭಾಗದಲ್ಲಿರುವ ದೈತ್ಯ ಸರೋವರ.
  • ಮುದ್ದೇನಹಳ್ಳಿ: ಮುದ್ದೇಹಳ್ಳಿ ಭಾರತ ರತ್ನ ಸರ್ ಎಂ ವಿಶ್ವವೇಶ್ವರಯ ಅವರ ಜನ್ಮಸ್ಥಳವಾಗಿದೆ. ಸರ್ ಎಂ ವಿಶ್ವೇಶ್ವರಯ್ಯ ಜನಿಸಿದ ಮನೆಯನ್ನು ಸ್ಮಾರಕವನ್ನಾಗಿ ಪರಿವರ್ತಿಸಲಾಗಿದೆ. ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ (ಸರ್ ಎಂ.ವಿ) 1860 ರ ಸೆಪ್ಟೆಂಬರ್ 15 ರಂದು ಮುದ್ದೇನಹಳ್ಳಿಯಲ್ಲಿ ಜನಿಸಿದರು. ವಿಶ್ವೇಶ್ವರಯ್ಯ 1912 ಮತ್ತು 1918 ರ ನಡುವೆ ಮೈಸೂರಿನ ದಿವಾನರಾಗಿ ಕೆಲಸ ಮಾಡಿದರು ಮತ್ತು ಕರ್ನಾಟಕದಲ್ಲಿ ಹಲವಾರು ಎಂಜಿನಿಯರಿಂಗ್ ಮತ್ತು ನಿರ್ಮಾಣ ಯೋಜನೆಗಳನ್ನು ಯಶಸ್ವಿಯಾಗಿ ಮುಗುಸಿದ ಕೀರ್ತಿಗೆ ಪಾತ್ರರಾಗಿದ್ದರು. ವಿಶ್ವೇಶ್ವರಯ ಅವರ ಜನ್ಮದಿನವನ್ನು ಎಂಜಿನಿಯರ್‌ಗಳ ದಿನವಾಗಿ ಆಚರಿಸಲಾಗುತ್ತದೆ. ಮುದ್ದೇನಹಳ್ಳಿಯಲ್ಲಿರುವ ಸರ್ ಎಂ ವಿಶ್ವವೇಶ್ವರಯ ಸ್ಮಾರಕವು  ಅವರ ಹಲವಾರು ವೈಯಕ್ತಿಕ ವಸ್ತುಗಳನ್ನು ಪ್ರದರ್ಶಿಸುತ್ತದೆ. ಸರ್ ಎಂ ವಿಶ್ವೇಶ್ವರಯ್ಯ ಅವರ ದೃಷ್ಟಿ, ಸರಳತೆ, ಜ್ಞಾನ ಮತ್ತು ಸ್ಪಷ್ಟತೆ ನಿಜಕ್ಕೂ ಸ್ಪೂರ್ತಿದಾಯಕವಾಗಿದೆ.
  • ಶ್ರೀನಿವಾಸ ಸಾಗರ:ಚಿಕ್ಕಬಳ್ಳಾಪುರ ಬಳಿಯ ಸುಂದರವಾದ ಸರೋವರ.
  • ಜಕ್ಕಲಮಡಗು ಅಣೆಕಟ್ಟು: ಚಿಕ್ಕಬಳ್ಳಾಪುರಕ್ಕೆ ಕುಡಿಯುವ ನೀರನ್ನು ಒದಗಿಸುವ ಜಲಾಶಯ.
  • ಗುಮ್ಮನಾಯಕ ಕೋಟೆ: ಬಾಗೆಪಲ್ಲಿಯಿಂದ ಪೂರ್ವಕ್ಕೆ 16 ಕಿ.ಮೀ ದೂರದಲ್ಲಿರುವ ಗುಮ್ಮನಾಯಕ ಕೋಟೆಯು 150 ಅಡಿ ಎತ್ತರದ ವೃತ್ತಾಕಾರದ ಬಂಡೆಗೆ ಹೆಸರುವಾಸಿಯಾಗಿದೆ. ಈ ಕೋಟೆಯನ್ನು 14 ನೇ ಶತಮಾನದಲ್ಲಿ ಸ್ಥಳೀಯ ಮುಖ್ಯಸ್ಥ ಗುಮ್ಮನಾಯಕ ನಿರ್ಮಿಸಿದನು. ಅವನ ಮತ್ತು ಅವನ ಉತ್ತರಾಧಿಕಾರಿಗಳು ಹಲವಾರು ವರ್ಷಗಳ ಆಳ್ವಿಕೆ ನಡೆಸಿದರು.
  • ಚಿಂತಾಮಣಿ: ಮರಾಠಾ ಮುಖ್ಯಸ್ಥನ ಚಿಂತಾಮಣಿ ರಾವ್ ನಿಂದ ತನ್ನ ಹೆಸರು ಪಡೆದ  ಚಿಂತಾಮಣಿ ಚಿನ್ನ ಮತ್ತು ಬೆಳ್ಳಿ ವ್ಯಾಪಾರಕ್ಕೆ ಹೆಸರುವಾಸಿಯಾಗಿದೆ. ಚಿಂತಾಮಣಿ ಅಗರಬತ್ತಿ  ಉದ್ಯಮಕ್ಕೂ ಹೆಸರುವಾಸಿಯಾಗಿದೆ. ಸೋಮೇಶ್ವರ ದೇವಸ್ಥಾನ, ಕನ್ನಿಕೇಶ್ವರಿ ದೇವಸ್ಥಾನ ಮತ್ತು ಪಟಾಲಮ್ಮ ದೇವಸ್ಥಾನ ಜನಪ್ರಿಯ ದೇವಾಲಯಗಳಾಗಿವೆ.
  • ಚೆನ್ನಕೇಶವ ಬೆಟ್ಟ: ಚಿಕ್ಕಬಳ್ಳಾಪುರದ ನೈರುತ್ಯಕ್ಕೆ 8 ಕಿ.ಮೀ ದೂರದಲ್ಲಿರುವ ಚೆನ್ನಕೇಶವ ಬೆಟ್ಟವು ದೊಡ್ಡ ಗುಹೆ ದೇವಾಲಯವನ್ನು ಹೊಂದಿದೆ ಮತ್ತು ಚಾರಣಿಗರನ್ನು ಕೈ ಬೀಸಿ ಕರೆಯುತ್ತದೆ . ಉತ್ತರ ಪಿನಾಕಿನಿ ಮತ್ತು ದಕ್ಷಿಣ ಪಿನಾಕಿನಿ ನದಿಗಳು ಚೆನ್ನಕೇಶವ ಬೆಟ್ಟದಲ್ಲಿ ಉಗಮವಾಗುತ್ತವೆ.
  • ಕವಲೆದುರ್ಗ: ಸಮುದ್ರ ಮಟ್ಟದಿಂದ 4740 ಅಡಿ ಎತ್ತರ ಇರುವ ಚಿತ್ರದುರ್ಗದಿಂದ 8 ಕಿ.ಮೀ ದೂರದಲ್ಲಿರುವ ಕೋನಾಕಾರದ  ಶಿಖರ. ಕೋಟೆಯ ಅವಶೇಷಗಳನ್ನು ಕಾಣಬಹುದಾಗಿದೆ.
  • ರಹಮಂಗಡ್: ಹಳೆಯ ಕೋಟೆಗಳು ಮತ್ತು ದೇವಾಲಯಗಳಿಗೆ ನೆಲೆಯಾಗಿದೆ, ಚಿಂತಾಮಣಿಯಿಂದ ನೈರುತ್ಯಕ್ಕೆ 11 ಕಿ.ಮೀ. ದೂರದಲ್ಲಿದೆ.
ಸಾಹಸ ಮತ್ತು ಚಟುವಟಿಕೆಗಳು
  • ಸ್ಕಂದಗಿರಿ ಚಾರಣ: ಸ್ಕಂದಗಿರಿ ಬೆಟ್ಟವು ಚಾರಣಕ್ಕೆ ಜನಪ್ರಿಯವಾಗಿದೆ. ಹಲವಾರು ಖಾಸಗಿ ಸಂಸ್ಥೆಗಳು ಬೆಂಗಳೂರಿನಿಂದ ಸ್ಕಂದಗಿರಿಗೆ ಒಂದು ದಿನ / ರಾತ್ರಿಯ ಚಾರಣವನ್ನು ಆಯೋಜಿಸುತ್ತಾರೆ. ಸ್ಕಂದಗಿರಿಯು ಪಾಪಾಗ್ನಿ ಮಠಕ್ಕೂ ನೆಲೆಯಾಗಿದೆ.
ಸಾಹಸ ಮತ್ತು ಚಟುವಟಿಕೆಗಳು
  • ಸ್ಕಂದಗಿರಿ ಚಾರಣ: ಸ್ಕಂದಗಿರಿ ಬೆಟ್ಟವು ಚಾರಣಕ್ಕೆ ಜನಪ್ರಿಯವಾಗಿದೆ. ಹಲವಾರು ಖಾಸಗಿ ಸಂಸ್ಥೆಗಳು ಬೆಂಗಳೂರಿನಿಂದ ಸ್ಕಂದಗಿರಿಗೆ ಒಂದು ದಿನ / ರಾತ್ರಿಯ ಚಾರಣವನ್ನು ಆಯೋಜಿಸುತ್ತಾರೆ. ಸ್ಕಂದಗಿರಿಯು ಪಾಪಾಗ್ನಿ ಮಠಕ್ಕೂ ನೆಲೆಯಾಗಿದೆ.
ಧಾರ್ಮಿಕ ಸ್ಥಳಗಳು
  • ಭೋಗನಂದೀಶ್ವರ ದೇವಸ್ಥಾನ:  ಚಿಕ್ಕಬಳ್ಳಾಪುರ ಜಿಲ್ಲೆಯ ಅತ್ಯಂತ ಜನಪ್ರಿಯ ದೇವಾಲಯ. ನಂದಿ ಗ್ರಾಮದ ದ್ರಾವಿಡ ಶೈಲಿಯ ಭೋಗನಂದೀಶ್ವರ ದೇವಸ್ಥಾನವನ್ನು ಕ್ರಿಸ್ತ ಶಕ  806 ರಲ್ಲಿ  ಬಾಣಾ ರಾಜವಂಶದ ರತ್ನವಳ್ಳಿ ನಿರ್ಮಿಸಿದರು. ಭೋಗನಂದೀಶ್ವರ  ದೇವಾಲಯವು ಆಕರ್ಷಕ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ, ಉದ್ದವಾದ ಚೌಕಾಕಾರದ ಪ್ರಾಂಗಣಗಳಿಂದ ಸುತ್ತುವರೆದಿರುವ ದೊಡ್ಡ ಪುಷ್ಕರಿಣಿ, ಮತ್ತು ಸುಂದರ ಕೆತ್ತನೆಗಳು ಭೋಗನಂದೀಶ್ವರ ದೇವಸ್ಥಾನ ಮುಖ್ಯ ಆಕರ್ಷಣೆಗಳಾಗಿವೆ.
  • ಅರುಣಾಚಲೇಶ್ವರ ದೇವಸ್ಥಾನ: ಭೋಗನಂದೀಶ್ವರ ದೇವಸ್ಥಾನಕ್ಕೆ ಬಹಳ ಹತ್ತಿರವಿರುವ ಮತ್ತೊಂದು ದೇವಾಲಯ. ಇಲ್ಲಿ ಸುಂದರ ಗಂಗಾ, ಚೋಳ ಮತ್ತು ಹೊಯ್ಸಳ ಶೈಲಿಯ ವಾಸ್ತುಶಿಲ್ಪವನ್ನು ಕಾಣಬಹುದು
  • ದೇವರಗುಡಿಪಲ್ಲಿ ಶ್ರೀ ವೆಂಕಟರಮಣ
  • ಕೈವಾರ: ಹಿಂದೆ ಏಚಕ್ರಪುರ ಎಂದು ಕರೆಯಲಾಗುತ್ತಿದ್ದ ಕೈವಾರ ಪಾಂಡವರು ಕೌರವರೊಂದಿಗೆ ಪಗಡೆ ಆಟದಲ್ಲಿ ಸೋತ ನಂತರ ಅಜ್ಞಾತವಾಸ ನಡೆಸುತ್ತಿದ್ದ ಸ್ಥಳ ಎಂದು ನಂಬಲಾಗಿದೆ.  ಪಾಂಡವ ಸಹೋದರರಲ್ಲಿ ಒಬ್ಬನಾದ ಭೀಮ, ಗ್ರಾಮಸ್ಥರನ್ನು ಸತತವಾಗಿ ಹಿಂಸಿಸುತ್ತಿದ್ದ ಬಕಾಸುರ ಎಂಬ ರಾಕ್ಷಸನನ್ನು ಇಲ್ಲಿ ಕೊಂದಿದ್ದಾನೆ ಎನ್ನಲಾಗಿದೆ. ಅಮರನಾರಾಯಣ ಮತ್ತು ಭೀಮೇಶ್ವರ ದೇವಾಲಯಗಳು ಮತ್ತು ಯೋಗಿ ನಾರಾಯಣ ಆಶ್ರಮವು ಕೈವಾರದಲ್ಲಿ ಭೇಟಿ ನೀಡಲು ಯೋಗ್ಯವಾಗಿದೆ. ಸಣ್ಣ ಮೃಗಾಲಯ, ಗಿಡಮೂಲಿಕೆ ಉದ್ಯಾನ, ಪಾಂಡವರ ಹೆಸರಿನ ಕುಟೀರಗಳು, ಉದ್ಯಾನ ಮತ್ತು ಸಂಗೀತ ಕಾರಂಜಿಗಳು ಕೈವಾರದಲ್ಲಿ ಪ್ರಮುಖ ಆಕರ್ಷಣೆಗಳಾಗಿವೆ.
  • ಫಖಿ ಷಾ ವಾಲಿಯ ಮುರುಗಮಲ್ಲಾ ದರ್ಗಾ: ಕರ್ನಾಟಕದ ಅತ್ಯಂತ ಹಳೆಯ ದರ್ಗಾಗಳಲ್ಲಿ ಒಂದಾಗಿದೆ, ಇದು ಚಿಂತಾಮಣಿಯಿಂದ ಸುಮಾರು 8 ಕಿ.ಮೀ ದೂರದಲ್ಲಿದೆ. ಮುರುಗಮಲ್ಲಾದಲ್ಲಿ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯವೂ ಇದೆ.
  • ರಂಗಸ್ಥಳ: ವಿಜಯನಗರ ಶೈಲಿಯಲ್ಲಿ ನಿರ್ಮಿಸಲಾದ ಭಗವಾನ್ ರಂಗನಾಥ (ವಿಷ್ಣು) ದೇವಾಲಯವನ್ನು ಹೊಂದಿರುವ ಗ್ರಾಮ.
  • ವಿದುರಸ್ವತ: ವಿದುರನು ಈ ಗ್ರಾಮದಲ್ಲಿ ಅಶ್ವಥ ಮರವನ್ನು ನೆಟ್ಟನೆಂದು ಹೇಳಲಾಗುತ್ತದೆ. ವಿದುರಸ್ವತ ನಾಗ ಪ್ರತಿಷ್ಠಾನ ಆಚರಣೆಗಳಿಗೆ (ಸರ್ಪ ದೋಶವನ್ನು ತೆರವುಗೊಳಿಸಲು) ಜನಪ್ರಿಯವಾಗಿದೆ. ಮಕ್ಕಳನ್ನು ಬಯಸುವ ದಂಪತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ ಮತ್ತು ಸಣ್ಣ ಗಾತ್ರದ ಬೆಳ್ಳಿ ಸರ್ಪಗಳನ್ನು ದಾನವಾಗಿ ನೀಡುತ್ತಾರೆ.
  • ಮಿನಕನಗುರ್ಕಿ: ಮಹೇಶ್ವರಿ ಅಮ್ಮ ದೇವಸ್ಥಾನ ಮತ್ತು ವಾರ್ಷಿಕ ಜಾತ್ರೆಗೆ ಜನಪ್ರಿಯವಾಗಿದೆ.
  • ಅಲಂಬಗಿರಿ: ಕೋಟೆಯೊಳಗೆ ಇರುವ ಭಗವಾನ್ ವೆಂಕಟರಮಣ ದೇವಾಲಯಕ್ಕೆ ಜನಪ್ರಿಯವಾಗಿದೆ.
  • ಕೈಲಾಸ ಕ್ಷೇತ್ರ: ಚಿಂತಾಮಣಿ ಪಟ್ಟಣದಿಂದ 5 ಕಿ.ಮೀ ದೂರದಲ್ಲಿರುವ ಹಲವು ಗುಹಾಂತರ ದೇವಾಲಯಗಳನ್ನು ಹೊಂದಿರುವ ಧಾರ್ಮಿಕ ಕೇಂದ್ರ. ಕೈಲಾಸ ಕ್ಷೇತ್ರದ ಬಳಿಯ ವಡ್ಡಹಳ್ಳಿಯಲ್ಲಿರುವ ರಂಗನಾಥಸ್ವಾಮಿ ಮತ್ತು ಚೆನ್ನಕೇಶವ ಗುಹೆ ದೇವಾಲಯಗಳ ಬಂಡೆಗಳ ಮೇಲೆ ಸ್ವಾಭಾವಿಕವಾಗಿ ರಚನೆಯಾದ ಹಾವಿನ ಹೆಡೆಗಳನ್ನು ನೋಡಬಹುದಾಗಿದೆ.
  • ಗೌರಿಬಿದನೂರು: ವಿಜಯನಗರ ಶೈಲಿಯ ಸ್ತಂಭಗಳಿರುವ ವೆಂಕಟರಮಣ ದೇವಸ್ಥಾನಕ್ಕೆ ಜನಪ್ರಿಯವಾಗಿದೆ.
  • ಕಂದವರ: ಜ್ವರಹರೇಶ್ವರ ದೇವಸ್ಥಾನಕ್ಕೆ ಜನಪ್ರಿಯವಾಗಿದೆ.
  • ಅಂಬಾಜಿದುರ್ಗ: ಚಿಂತಾಮಣಿಯಿಂದ ನೈರುತ್ಯಕ್ಕೆ 6 ಕಿ.ಮೀ ದೂರದಲ್ಲಿರುವ ಬೆಟ್ಟದ ಕೋಟೆ. ಅಂಬಾಜಿದುರ್ಗದ ಕೋಟೆಯ ಮೇಲ್ಭಾಗದಲ್ಲಿ ಒಂದು ಶಿವ ದೇವಾಲಯ ಮತ್ತು ಉಪ್ಪಾರ‌ಪೇಟೆ ಗ್ರಾಮದ ಬೆಟ್ಟದ ಬುಡದಲ್ಲಿ ಮತ್ತೊಂದು ಶಿವ ದೇವಾಲಯವಿದೆ.