Important view of kings of India.

Jul 09, 2022 03:58 pm By Admin

ಭಾರತದ ಪ್ರಮುಖ ಅರಸರ ಸಂಕ್ಷಿಪ್ತ ನೋಟ

  1. ಬಿಂಬಸಾರ (ಕ್ರಿ.ಪೂ.-544-492)
  • ಅಶ್ವಘೋಷನು ಬಿಂಬಸಾರ ಹರಾಂಕ ಸಂತತಿಗೆ ಸೇರಿದವನು ಎಂದು ಹೇಳಿದ್ದಾನೆ.
  • ಬಿಂಬಸಾರನ ರಾಜಧಾನಿ-ರಾಜಗರ್ (ಗಿರಿವಜ್ರ)
  • ಗಜಸೈನ್ಯ ಹೊಂದಿದ ಈತನು ಚಂಪಾ, ಅಂಗ ರಾಜ್ಯಗಳನ್ನು ವಶಪಡಿಸಿಕೊಂಡನು.
  • ಬಿಂಬಸಾರನ ಆಸ್ಥಾನವೈದ್ಯ- ಜೀವಕ.
  • ಈತನು 500 ಪತ್ನಿಯರನ್ನು ಹೊಂದಿದ್ದನು.
  • ಬಿಂಬಸಾರನು ಬುದ್ಧನ ಸಮಕಾಲೀನ ದೊರೆ
  • ಬಿಂಬಸಾರನು ಮಗನಾದ ಅಜಾತಶತ್ರುವಿನಿಂದ ಕೊಲೆಯಾದನು.

2) ಅಜಾತಶತ್ರು (ಕ್ರಿ.ಪೂ.-495-460)

  • ತಂದೆಯನ್ನು ಕೊಂದು ಅಜಾತಶತ್ರು ‘ಪಿತೃಘಾತಕ’ ಎಂಬ ಬಿರುದು ಹೊಂದಿದನು.
  • ಮಹಾಶೀಲಕಂಠ, ರಥಮುಸಲ ಎಂಬ ಯುದ್ಧ ತಂತ್ರ ಹೊಂದಿದನು.
  • ಬೌದ್ಧಧರ್ಮದ ಪ್ರಥಮ ಸಮ್ಮೇಳನವನ್ನು ಕ್ರಿ.ಪೂ. 483 ರಲ್ಲಿ ರಾಜಗೃಹದಲ್ಲಿ ನಡೆಸಿದನು.
  • ಕಾಶಿಯ ಅರಸ ಪ್ರಸನಜೀತನನ್ನು ಸೋಲಿಸಿದನು.

3) ಅಲೆಗ್ಸಾಂಡರ್ (ಕ್ರಿ.ಪೂ.-356-323)

  • ಕ್ರಿ.ಪೂ. 327 ರಲ್ಲಿ ಭಾರತಕ್ಕೆ ಅಲೆಕ್ಸಾಂಡರನು ಬಂದನು.
  • ಈತನು ಕ್ರಿ.ಪೂ. 356 ರಲ್ಲಿ ಮೆಸಿಡೋನಿಯಾದಲ್ಲಿ ಜನಿಸಿದನು.
  • ಈತನ ತಂದೆ-2ನೇ ಪಿಲಿಪ್, ತಾಯಿ-ಒಂಪಿಯಾ, ಗುರು ಅರಿಸ್ಟಾಟಲ್
  • ಈತನಿಗೆ ಪ್ರಿಯವಾದ ವಸ್ತುಗಳು – ಖಡ್ಗ’ ಮತ್ತು ಹೋಮರನ ‘ಇಲಿಯಡ್’ ಮಹಾ ಕಾವ್ಯ
  • ಕ್ರಿ.ಪೂ. 336 ರಲ್ಲಿ ಈಜಿಪ್ಟ್, ಕ್ರಿ.ಪೂ. 330ರಲ್ಲಿ ಪರ್ಷಿಯನ್ನರ ಮೇಲೆ ವಿಜಯಸಾಧಿಸಿದನು.
  • ಕ್ರಿ.ಪೂ. 327ರಲ್ಲಿ ಭಾರತದ ವಾಯವ್ಯ ಭಾಗಕ್ಕೆ ದಾಳಿ ಕೈಗೊಂ ಡನು..
  • ಪುಷ್ಪಲಾವತಿ, ಮಸ್ಸಾಗಳು ಅಲೆಗ್ಲಾಂಡರನ ಆಕ್ರಮಣಕ್ಕೆ ತುತ್ತಾದ ಪ್ರದೇಶಗಳು.
  • ಕಾಬುಲಿನಲ್ಲಿ ಪ್ರಭುತ್ವ ಸ್ಥಾಪಿಸಿ, ಭಾರತಕ್ಕೆ ಬರುವಾಗ ತನ್ನ ಸೈನ್ಯವನ್ನು ಎರಡು ವಿಭಾಗಗಳನ್ನಾಗಿ ಮಾಡಿದನು. ಒಂದರ ನೇತೃತ್ವವನ್ನು ತಾನು, ಇನ್ನೊಂದರ ನೇತೃತ್ವವನ್ನು ಹೆಪಾಸ್ಟಿಯನ್ ಪರ್ಡಿಕಾನಿಗೆ ವಹಿಸಿದನು.
  • ಅಲೆಕ್ಸಾಂಡರ್ ಕುನ‌ ಮತ್ತು ಸ್ವಾತ ಕಣಿವೆಯ ಬುಡಕಟ್ಟು ಜನಾಂಗವನ್ನು ಸೋಲಿಸಿದನು.
  • ಕ್ರಿ.ಪೂ. 326 ರಲ್ಲಿ ಪುರೂರಾನ್ ಮತ್ತು ಅಲೆಕ್ಸಾಂಡರ್ ನಡುವೆ ‘ಹೈಡಾಸ್ಪಸ್‌ಕಾಳಗ’ ನಡೆಯಿತು. ఝలం ನದಿಯನ್ನು “ಜಲಲಪುರ’ ಎಂಬಲ್ಲಿ ಅಲೆಕ್ಸಾಂಡರ ದಾಟಿದನು.
  • ಭಾರತದ ಪೌರವ ಅರಸನೊಂದಿಗೆ ಸಿರ್ವಾಳ ಹಾಗೂ ಪಕ್ರಾಳ್ ಎಂಬ ಹಳ್ಳಿಯಲ್ಲಿ ಅಲೆಕ್ಸಾಂಡರ್ ಯುದ್ಧ ಸಾರಿದನು. ಯುದ್ಧದಲ್ಲಿ ಪೌರವನು ಸೋತನು.
  • ನಂತರ ಕತಾಂಬ್ ಜನರ ರಾಜಧಾನಿ ಸ್ಥಂಭವನ್ನು ವಶಪಡಿ ಸಿಕೊಂಡನು.
  • ಭಾರತದ ಒಳಗಡೆ ಬರಲು ನಿರಾಕರಿಸಿ ಮಾತನಾಡಿದ ಸೈನಿಕ
  • ಅಲೆಕ್ಸಾಂಡರನಿಗೆ ಸಿಬಾಯ್, ಅಗಲಾಸ್ಥೆ ಎಂಬ ಯುದ್ಧಾಸಕ್ತಿ ಜನರು, ಭೀಕರ ಕಾಳಗ ಮಾಡಿದರು.
  • ಕ್ರಿ.ಪೂ. 323ರಲ್ಲಿ ಬ್ಯಾಬಿಲೋನ್‌ನಿಯಾದಲ್ಲಿ ಮರಣ ಹೊಂದಿದನು.

4) ಚಂದ್ರಗುಪ್ತ ಮೌರ್ಯ (ಕ್ರಿ.ಪೂ.-322-298)

  • ಚಂದ್ರಗುಪ್ತ ಮೌರ್ಯ ಮೌರ್ಯ ಸಾಮ್ರಾಜ್ಯ ಸ್ಥಾಪಕ, ಈತನು ಕ್ರಿ.ಪೂ. 340 ರಲ್ಲಿ ಜನಿಸಿದನು.
  • ಚಂದ್ರಗುಪ್ತ ಮೌರ್ಯನ ತಾಯಿ ಮುದ್ರಾದೇವಿ.
  • ಕೌಟಿಲ್ಯನ ಸಹಾಯದಿ೦ದ ಚಂದ್ರಗುಪ್ತನು ಮೌರ್ಯ ಸಾಮ್ರಾಜ್ಯ ಸ್ಥಾಪಿಸಿದನು.
  • ಮುದ್ರಾರಾಕ್ಷಸ ಗ್ರಂಥದಲ್ಲಿ ಚಂದ್ರಗುಪ್ತ ಮೌರ್ಯನನ್ನು ‘ವೃಷಲ’ಎಂದು ಗುರುತಿಸಲಾಗಿದೆ.
  • ರಾಯ್‌ಚೌಧರಿಯವರು ಚಂದ್ರಗುಪ್ತ ಮೌರ್ಯನು ಕಾತ ವರ್ಗ’ಕ್ಕೆ ಸೇರಿದವನು ಎಂದು ಉಲ್ಲೇಖಿಸಿದ್ದಾರೆ.
  • ಚಂದ್ರಗುಪ್ತ ಮೌರ್ಯನ ರಾಜಧಾನಿ -ಪಾಟಲಿಪುತ್ರ
  • ಚಂದ್ರಗುಪ್ತನ ಪ್ರಧಾನ ಮಂತ್ರಿ – ಕೌಟಿಲ್ಯ (ಚಾಣಕ್ಯ).
  • ಈತನು ಕ್ರಿ.ಪೂ. 324ರಲ್ಲಿ ನಂದರ ಕೊನೆಯ ಧನನಂದನನ್ನು ಸೋಲಿಸಿ, ಮೌರ್ಯ ಸಾಮ್ರಾಜ್ಯ ಸ್ಥಾಪಿಸಿದನು.
  • ಸೆಲ್ಯುಕಸ್ ನಿಕೇಟರ್‌ನೊಂದಿಗೆ ಕ್ರಿ.ಪೂ. 305ರಲ್ಲಿ ಯುದ್ಧಮಾಡಿ ಆತನನ್ನು ಸೋಲಿಸಿದನು. ಸೋತ ಸೆಲ್ಯುಕಸ್” ಕಾಬೂಲ್, ಕಂದಹಾರ, ಗಾಂಧರ ಮುಂತಾದ ಪ್ರದೇಶಗಳನ್ನು ಬಿಟ್ಟುಕೊಟ್ಟನು.
  • ಚಂದ್ರಗುಪ್ತ ಮೌರ್ಯ ಪಟ್ಟದ ರಾಣಿ-ಹೆಲೆನಾ
  • ಚಂದ್ರಗುಪ್ತ ಮೌರ್ಯನ ಆಸ್ಥಾನಕ್ಕೆ ಮೆಗಾಸ್ಥಾನಿಸ್‌ ಎಂಬ ರಾಯಭಾರಿ ಭೇಟಿ ನೀಡಿದನು. ಈತನ ಕೃತಿ- ಇಂಡಿಕಾ’ ಇದು ಗ್ರೀಕ್ ಭಾಷೆಯಲ್ಲಿದೆ.
  • ಕ್ರಿ. ಪೂ. 313 ರಲ್ಲಿ ಕಾಥೆವಾಡ್, ಮಾಳ್ವಗಳನ್ನು ಚಂದ್ರಗುಪ್ತನು ಗೆದ್ದುಕೊಂಡನು.
  • ಚಂದ್ರಗುಪ್ತ ಮೌರ್ಯನ ಗುಜರಾತದ ರಾಜ್ಯಪಾಲ – ಪುಷ್ಯಗುಪ್ತ
  • ಭದ್ರಬಾಹುವಿನೊಂದಿಗೆ ದಕ್ಷಿಣ ಭಾರತಕ್ಕೆ ಬಂದ ಚಂದ್ರಗುಪ್ತ ಮೌರ್ಯ ಕಿ.ಪೂ. 299 ಸಲ್ಲೇಖನ ವೃತ ಕೈಗೊಂಡು, ಪ್ರಾಣ ತ್ಯಜಿಸಿದನು.

5) ಬಿಂದುಸಾರ (ಕ್ರಿ.ಪೂ.-298-273)

  • ಬಿಂದುಸಾರ ಚಂದ್ರಗುಪ್ತ ಹಾಗೂ ಹೆಲೆನಾಳ ಮಗ
  • ಈತನು “ಅಮಿತ್ರಘಾತ್ ಎಂಬ ಬಿರುದು ಹೊಂದಿದ್ದನು.
  • ಈತ 16 ಜನ ಹೆಂಡತಿಯರು 101 ಮಕ್ಕಳನ್ನು ಹೊಂದಿದ್ದನು.
  • ಈತನ ಮೊದಲ ಮಗ- ಸುಶಿಮ ತಕ್ಷಶಿಲೆಯ ರಾಜಪಾಲ, ಎರಡನೇ ಮಗ-ಅಶೋಕ ಅವಂತಿ (ಉಜ್ಜಯನಿ)ಯ ರಾಜ್ಯಪಾಲ, ಮೂರನೇ ಮಗ ತಿಸ್ಸಾ ಸುವರ್ಣಗಿರಿಯ ರಾಜಪಾಲನಾಗಿದ್ದನು.
  • ಗ್ರೀಕ್ ರಾಯಭಾರಿ ಡೆಮಾಕಸ್ ಬಿಂದುಸಾರನ ಆಸ್ಥಾನಕ್ಕೆ ರಾಯಭಾರಿಯಾಗಿ ಭೇಟಿ ನೀಡಿದ್ದನು.

6) ಅಶೋಕ (ಕ್ರಿ.ಪೂ.-298-273)

  • ಮೌರ್ಯ ಸಾಮ್ರಾಜ್ಯದ ಪ್ರಸಿದ್ಧ ಅರಸ ಅಶೋಕ
  • ಬಿಂದುಸಾರ ಮತ್ತು ಸುಭದ್ರೆಯರ ಮಗನಾಗಿ ಅಶೋಕ ಕ್ರಿ.ಪೂ. 304 ತಕ್ಷಶಿಲೆಯಲ್ಲಿ ಜನಿಸಿದನು.
  • ಆವಂತಿ (ಉಜ್ಜಯನಿ) ಮತ್ತು ತಕ್ಷಶಿಲೆಯ ರಾಜಪಾಲನಾಗಿ ತಂದೆ ಬಿಂದುಸಾರನ ಅವಧಿಯಲ್ಲಿ ಸೇವೆ ಸಲ್ಲಿಸಿದನು.
  • ಕ್ರಿ. ಪೂ. 269 ರಲ್ಲಿ ಸಹೋದ ರನನ್ನು ಸಂವಹರಿಸಿ, ಅಧಿಕಾರಕ್ಕೆ ಬಂದನು.
  • ಕ್ರಿ.ಪೂ. 261 ರಲ್ಲಿ ಕಳಿಂಗದ ಮೇಲೆ ಯುದ್ಧ ಸಾರಿದನು. ಯುದ್ಧ ದಲ್ಲಿ ಸಾವಿರಾರು ಸೈನಿಕರ ಮಾರಣಹೋಮ ನಡೆಯಿತು. ಇದರಿಂದ ಅಶೋಕ ಯುದ್ಧವನ್ನು ತ್ಯಜಿಸಿ, ತನ್ನ ದೃಷ್ಟಿಕೋನವನ್ನು ಬದಲಾಯಿಸಿದನು.
  • ಅಶೋಕನ ಮಂತ್ರಿ – ರಾಧಾಗುಪ್ತ
  • ಅಶೋಕನು ಉಪಗುಪ್ತನ ಸಹಾಯದಿಂದ ಬೌದ್ಧಧರ್ಮ ಸ್ವೀಕರಿಸಿದನು.
  • ಅಶೋಕನ ಪಟ್ಟದ ರಾಣಿಯರು- ಕರುಬಾಕಿ, ತಿಷ್ಯರಕ್ಷಿತ, ಅಸಿಂಧಮಿತ್ರ, ಮಹಾದೇವಿ.
  • ಕುಶಿನಗರ, ಲುಂಬಿನಿ, ರಾಜಗ್ರಹ, ವೈಶಾಲಿ, ಸಾರಾನಾಥಗಳಿಗೆ ಭೇಟಿ ನೀಡಿದ ಅಶೋಕನು ಅಲ್ಲಿ ಬೌದ್ಧ ಸ್ಮಾರಕಗಳನ್ನು ಕಟ್ಟಿಸಿದನು.
  • ಭಾರತದಲ್ಲಿ 84000 ಸ್ಥಪಗಳನ್ನು ಅಶೋಕ ಕಟ್ಟಿಸಿದನು. ಇವುಗಳಲ್ಲಿ ಅತೀ ದೊಡ್ಡದಾದ ಸ್ಥಪ-ಸಾಂಚಿಸ್ಕೊಪ
  • ಧರ್ಮ ಪ್ರಚಾರಕ್ಕೆ ಧರ್ಮ ಮಹಾಮಾತೃರನ್ನು ನೇಮಿಸಿದನು.
  • ಕ್ರಿಶೂ, 252 ರಲ್ಲಿ ಬೌದ್ಧ ಧರ್ಮದ 3ನೇ ಸಮ್ಮೇಳನವನ್ನು ಪಾಟಲೀಪುತ್ರದಲ್ಲಿ ಹಮ್ಮಿಕೊಂಡನು.

ಅಶೋಕನು ಬೌದ್ಧಧರ್ಮ ಪ್ರಚಾರಕ್ಕೆ ಕಳುಹಿಸಿ ಕೊಟ್ಟ ವ್ಯಕ್ತಿಗಳು

• ಮಹೇಂದ್ರ, ಸಂಘಮಿತ್ರೆ – ಶ್ರೀಲಂಕಾ
• ಮಜ್ಜಿಮ – ಹಿಮಾಲಯ ಪರ್ವತ
• ರಕ್ಷಿತ- ಉತ್ತರ ಭಾಗ
• ಧರ್ಮರಕ್ಷಿತ – ಪಶ್ಚಿಮ ಭಾಗ
• ಮಹಾರಕ್ಷಿತ – ಗ್ರೀಕ್ ರಾಜ್ಯಗಳು
• ಮಹಾಧರ್ಮ ರಕ್ಷಿತ – ಮಹಾರಾಷ್ಟ್ರ
• ಅಶೋಕನು ಸ್ಥಾಪಿಸಿದ ಧರ್ಮ- ಅಶೋಕ ಧಮ್ಮ,

⏩ಅಶೋಕನ ಲೋಕೋಪಯೋಗಿ ಕಾರ್ಯಗಳು :

• ರಸ್ತೆಗಳನ್ನು ನಿರ್ಮಿಸಿದನು.
• ರಸ್ತೆಯ ಎಡಬಲಭಾಗದಲ್ಲಿ ಗಿಡಗಳನ್ನು ನೆಡಿಸಿದನು.
• ನೀರಿನ ಅರವಟ್ಟಿಗೆಗಳನ್ನು ಸ್ಥಾಪಿಸಿದನು.
• ಅನ್ನಛತ್ರಗಳನ್ನು ನಿರ್ಮಿಸಿದನು.
• ವಿಶ್ರಾಂತಿ ಗೃಹಗಳನ್ನು ನಿರ್ಮಿಸಿದನು.

⏩ಅಶೋಕನ ಶಾಸನಗಳು :

• ಅಶೋಕನನ್ನು ‘ಶಾಸನಗಳ ಪಿತಾಮಹ ಎಂದು ಕರೆಯುತ್ತಾರೆ.
• ಅಶೋಕನ 53 ಶಾಸನಗಳು ಬ್ರಾಡ್ಮಿ ಖರೋಷ್ಠಿ ಲಿಪಿಯಲ್ಲಿ ಇವೆ.
• ಬಹುತೇಕ ಶಾಸನಗಳು ಪರ್ಷಿಯನ್ ಗ್ರೀಕ್, ಅರೇಬಿಕ್ ಹಾಗೂ ಪಾಲಿ ಭಾಷೆಯಲ್ಲಿ ರಚನೆಯಾಗಿವೆ.
• ಅಶೋಕನ ಶಾಸನಗಳ ಲಿಪಿ – ಬ್ರಾಹ್ಮ, ಖರೋಷ್ಠಿ,

ಕರ್ನಾಟದಲ್ಲಿ ಅಶೋಕನ ಶಾಸನಗಳು :

• ರಾಯಚೂರು – ಮಸ್ಕಿ, ಗವಿಮಠ, ಪಾಲ್ಕಿಗುಂಡ.
• ಬಳ್ಳಾರಿ – ಸಿಟ್ಟೂರು, ಉದೊಗೊಳು
• ಚಿತ್ರದುರ್ಗ – ಬ್ರಹ್ಮಗಿರಿ, ಜಟಿಂಗರಾಮೇಶ್ವರ
• ಕಲಬುರ್ಗಿ – ಸನ್ನತಿ.

⏩ಅಶೋಕನ 14 ಬಂಡೆಗಲ್ಲು ಶಾಸನಗಳು :
I ನೇ ಶಾಸನ-ಪ್ರಜೆಗಳೆಲ್ಲಾ ನನ್ನ ಮಕ್ಕಳು, ಮನರಂಜನೆ ನಿಷೇಧ
II ನೇ ಶಾಸನ-ಲೋಕೋಪಯೋಗಿ ಕಾರ್ಯಗಳು
III ನೇ ಶಾಸನ-ದಾನ-ಧರ್ಮ
IV ನೇ ಶಾಸನ-ಧರ್ಮ ವಿಜಯ
V ನೇ ಶಾಸನ-ರಾಜನ ಮತ್ತು ಸಹೋದರರ ಪ್ರಜೆಗಳ ಕಾರ್ಯಗಳು
VIನೇ ಶಾಸನ- ಆಡಳಿತದ ಕುರಿತು
VII ನೇ ಶಾಸನ-ಧರ್ಮಸಹನೆ
VIIIನೇ ಶಾಸನ-ಯಾತ್ರೆಗಳ ಪ್ರಸ್ಥಾವನೆ
IX ನೇ ಶಾಸನ-ಜೀವನದ ನೀತಿ ನಿರೂಪಣೆ ಕುರಿತು
Xನೇ ಶಾಸನ-ಜೀವನ ಕ್ರಮ
XIನೇ ಶಾಸನ-ನಿರಾಡಂಭರ ಜೀವನಕ್ಕೆ ಪ್ರಾಧಾನ್ಯತೆ XII ನೇ ಶಾಸನ-ಕೃಷಿ, ಸ್ತ್ರೀ, ಧರ್ಮ ಪ್ರಚಾರಕರು
XIII ನೇ ಶಾಸನ-ಕಳಿಂಗ ಯುದ್ಧ
XIV ನೇ ಶಾಸನ-ಪ್ರಚಾರದ ಕುರಿತು

  • ಅಶೋಕನು ಅಲಹಾಬಾದ ಶಾಸನವನ್ನು ಕೌಸಂಬಿಯಲ್ಲಿ ಹೊರಡಿಸಿದನು.
  • ಬುದ್ಧನ ಜನ್ಮಸ್ಥಳದ ಬಗ್ಗೆ ತಿಳಿಸುವ ಶಾಸನ -ರುಮೈಂಡೈ ಶಾಸನ,
  • ನಾಲ್ಕು ಮುಖದ ಸಿಂಹ ಕಂಡು ಬರುವ ಲಾಂಛನ ಸಾರಾನಾಥ ಶಾಸನದಿಂದ ತಿಳಿಯುವುದು.
  • ಅಶೋಕನ ಬೌದ್ಧಧರ್ಮದ ಬಗ್ಗೆ ತಿಳಿಸುವ ಶಾಸನ -ಬಾಬ್ರೂ ಶಾಸನ.
  • ಅಶೋಕನ ಶಾಸನಗಳನ್ನು ಕೆತ್ತಿದ ಶಿಲ್ಪಿಯ ಹೆಸರು ಕಂಡು ಬಂದ ಶಾಸನ – ಬ್ರಹ್ಮಗಿರಿ ಶಾಸನ. ಇದರ ಶಿಲ್ಪಿ -ಚಪಡ
  • ತೆರಾಯ ಸ್ಥಂಭ ಶಾಸನ – ಅಶೋನು ಬೌದ್ಧರ ಪವಿತ್ರ ಸ್ಥಳಗಳಿಗೆ ಭೇಟಿ ನೀಡಿದರೆ ಕುರಿತು ತಿಳಿಸುತ್ತದೆ.

7) ಒಂದನೇ ಕಡ್‌ಪಿಸಸ್ (ಕ್ರಿ.ಶ 40-65) :

  • ಕುಶಾನರು ಮಧ್ಯ ಏಷ್ಯಾದಿಂದ ಬಂದವರು.
  • ಕುಶಾನರ ಸ್ಥಾಪಕ – ಒಂದನೇ ಕಡ್‌ಪಿಸಸ್
  • ಒಂದನೇ ಕಡ್‌ಪಿಸಸ್ ಬೌದ್ಧ ಮತಾವಲಂಬಿಯಾಗಿದ್ದನು.
  • ಕುಶಾನರು ಯುಚಿ ಪಂಗಕ್ಕೆ ಸೇರಿದವರು.
  • ಒಂದನೇ ಕಡ್‌ಪಿಸಸ್ ಗ್ರೀಕರನ್ನು ಸೋಲಿಸಿದನು.
  • ಈತನ ಇನ್ನೊಂದು ಹೆಸರು ಕುಜಲ ಕಡ್‌ಪಿಸಸ್

8) ಎರಡನೇ ತಪ್‌ಪಿಸಸ್‌ (ಕ್ರಿ.ಶ. 40-55)

  • ಈತನನ್ನು ವಿಮಾ ಕಡಪಿಸಸ್ ಎಂದು ಕರೆಯುತ್ತಾರೆ.
  • ಪಂಜಾಬ್, ಉತ್ತರ ಪ್ರದೇಶದ ಕೆಲವು ಪ್ರದೇಶಗಳನ್ನು ಗೆದ್ದು ಕೊಂಡುತ್ತಿದ್ದನು.
  • ಈತನು ತಾಮ್ರ, ಕಂಚಿನ ನಾಣ್ಯಗಳನ್ನು ಜಾರಿಗೊಳಿಸಿದನು.
  • ಭಾರತದಲ್ಲಿ ಮೊದಲ ಬಾರಿಗೆ ಚಿನ್ನದ ನಾಣ್ಯಗಳನ್ನು ಟಂಕಿಸಿದ ಅರಸ ಈತನಾಗಿದ್ದಾನೆ.
  • ಕಂದಹಾರ್, ಗಾಂಧಾರ, ಕಾಬೂಲ್‌ ಕಣಿವೆಗಳಲ್ಲಿ ಈತನ ನಾಣ್ಯ ಗಳು ದೊರೆತಿವೆ. ಆ ನಾಣ್ಯಗಳ ಮೇಲೆ ‘ಮಹೇಶ್ವರ’, ಸರ್ವ ಲೋಕೇಶ್ವರ, ಸಮಗ್ರ ಪ್ರಪಂಚದ ಒಡೆಯನೆಂದು ಕೆತ್ತಿಸಿದನು.
  • ಶೈವಪಂಥದವನಾದ ಈತನು ತನ್ನ ನಾಣ್ಯಗಳ ಮೇಲೆ ತ್ರಿಶೂಲದಾರಿ ಶಿವನ ಚಿತ್ರವನ್ನು ಕೆತ್ತಿಸಿದನು.
  • ಚೀನಾದ ಪಾನ್-ಛಾಯೋನ್ ಕೈಯಲ್ಲಿ 2ನೇ ಕಡಪಿಸ್‌ಸ್ ಸೋಲನನ್ನು ಅನುಭವಿಸಿದನು.

9) ಕನಿಷ್ಠ (ಕ್ರಿ.ಶ. 78-120)

  • ಕನಿಷ್ಠರನು ಕುಶಾನರ ಅತ್ಯಂತ ಪ್ರಸಿದ್ಧ ದೊರೆ.
  • ಕನಿಷ್ಕನ ರಾಜಧಾನಿ ಪುರುಷಪುರ (ಪೇಶಾವರ)
  • ಕನಿಷ್ಠನ 2ನೇ ರಾಜಧಾನಿ ಮಥುರಾ
  • ಕನಿಷ್ಠನ ರಾಜ್ಯ ಗಡಿ ಬಿಹಾರ, ಉತ್ತರಪ್ರದೇಶ, ಮಾಳ್ವ,ರಾಜಸ್ಥಾನ, ಸೌರಾಷ್ಟ್ರ, ಸಿಂದ್, ಪಂಜಾಬ್, ಕಾಶ್ಮೀರ, ಬೋರ ಸಾನ್ ಹಾಗೂ ಚೀನಾದ ಗಡಿದವರೆಗೆ ಹಬ್ಬಿತ್ತು.
  • ಈತನು ಮಹಾಯಾನದ ಪಂಥವನ್ನು ಅನುಸರಿಸಿದನು.
  • ಭಾರತದಲ್ಲಿ ‘ಬೂಟ’ನ್ನು ಮೊದಲಿಗೆ ಪರಿಚಯಿಸಿದ ವ್ಯಕ್ತಿ ಕನಿಷ್ಠ.
  • ನಾಲ್ಕನೇ ಬೌದ್ಧ ಧರ್ಮದ ಸಮ್ಮೇಳನ ಕನೌಜದಲ್ಲಿ ನಡೆಸಿದನು.
  • 4ನೇ ಬೌದ್ಧ ಸಮ್ಮೇಳನದಲ್ಲಿ ಹಿನಾಯಾನ ಮತ್ತು ಮಹಾಯಾನ ಎಂಬ ಪಂಥಗಳು ಹುಟ್ಟಿದವು.
  • ಕನಿಷ್ಠನ ನಾಣ್ಯಗಳಲ್ಲಿ ಹಿಂದೂ, ಪರ್ಷಿಯಾ, ಸುಮೆರಿಯಾ, ಗ್ರೀಕ್ ದೇವತೆಗಳ ಲಾಂಛನಗಳನ್ನು ಕಾಣಬಹುದು.
  • ಮಹಾಸಮ್ಮೇಳನದ ವಿವರಗಳನ್ನು ಶಿಲಾಕೋಶ ಹಾಗೂ ಸ್ಫೂಪಗಳಲ್ಲಿ ಸಂಗ್ರಹಿಸಲಾಗಿದೆ.
  • ಕನಿಷ್ಠನನ್ನು “2ನೇ ಅಶೋಕ, ದೇವಪುತ್ರ, ಭಾರತದ ಸಿಜರ ಎಂದು ಕರೆಯುತ್ತಾರೆ.
  • ಕನಿಷ್ಠ ಪಾಟಲಿಪುತ್ರದ ಮೇಲೆ ದಾಳಿ ಮಾಡಿದಾಗ ಅಶ್ವಘೋ ಷನನ್ನು ಕರೆತಂದನು.
  • ಚೀನಾದ ಮೇಲೆ ದಾಳಿ ಮಾಡಿ ಪಾನ್-ಚಾವೋನ ಮಗ ಪಾನ್-ಯಾಂಗನನ್ನು ಸೋಲಿಸಿದನು.
  • ಕನಿಷ್ಠನ ಕೈಯಲ್ಲಿ ಶಕರ ಬಸ್ತಾವನು ಸೋತನು.
  • ಈತನು ಕಾಶ್ಮೀರದಲ್ಲಿ ‘ಕನಿಷ್ಠಪುರ’ ಎಂಬ ನಗರ ಕಟ್ಟಿಸಿದನು.
  • ಚೀನಾದ ಕಾಶಘರ, ಯಾರ್ಕಂದ ಪ್ರದೇಶಗಳನ್ನು ಗೆದ್ದನು.
  • ಕನಿಷ್ಕನು ತನ್ನ ನಾಣ್ಯಗಳ ಮೇಲೆ ಶಿವ, ಸೂರ್ಯ, ಅಗ್ನಿಗಳನ್ನು ಮುದ್ರಿಸಿದನು.
  • ಕನಿಷ್ಠನುಸ ಬೌದ್ಧಧರ್ಮದ ಮಹಾಯಾನ ಪಂಥಕ್ಕೆ ಬೆಂಬಲ ನೀಡಿದನು.
  • -ಕನಿಷ್ಕನ ಆಸ್ಥಾನದಲ್ಲಿ ಅಶ್ವಘೋಷ, ನಾಗಾರ್ಜುನ, ವಸುಮಿತ್ರ ಆಶ್ರಯ ಪಡೆದಿದ್ದರು.

10) ಪುಷ್ಯಮಿತ್ರ ಶುಂಗ :

  • ಮೌರ್ಯರ ಕೊನೆಯ ದೊರೆಯಾದ ಬೃಹದತ್ತ ಕೊಲೆ ಮಾಡಿ ಅಧಿಕಾರಕ್ಕೆ ಬಂದನು.
  • ಈತನು ಶುಂಗ ಸಾಮ್ರಾಜ್ಯವನ್ನು ಸ್ಥಾಪಿಸಿದನು ಹಾಗೂ ಗ್ರೀಕ್ ದಾಳಿಗಳನ್ನು ಎದುರಿಸಿದನು.
  • ವಿದರ್ಭ ರಾಜ್ಯವನ್ನು ವಶಪಡಿಸಿಕೊಂಡನು.
  • ಪುಷ್ಯಮಿತ್ರ ಶುಂಗನ ರಾಜಧಾನಿ -ಪಾಟಲಿಪುತ್ರ
  • ಪುಷ್ಯಮಿತ್ರನ ಮಗ ಅಗ್ನಿಮಿತ್ರ, ಮೊಮ್ಮಗ ವಸುಮಿತ್ರ.
  • ಈತನು ಎರಡು ಬಾರಿ ಅಶ್ವಮೇಧಯಾಗ ಮಾಡಿದನು.

11) ಖಾರವೇಲ :

  • ವಕ್ರದೇವನ ಮಗನಾದ ಖಾರವೇಲ ಚೇದಿಗಳ ಪ್ರಸಿದ್ಧ ಅರಸ.
  • ಖಾರುವೇಲನ ಬಗ್ಗೆ ತಿಳಿಸುವ ಶಾಸನ -ಹಾಥಿಗುಂಪಾ ಶಾಸನ.
  • ಹಾಥಿಗುಂಪು ಶಾಸನವು ಅಸದೃಗಿ ಮಹತ್ವವುಳ್ಳ ಒಂದು ಐತಿ ಹಾಸಿಕ ದಾಖಲೆಯಾಗಿದೆ. ಈ ಶಾಸನ ಕಾಲಗಣನೆಯ ಘಟನೆ ಗಳನ್ನು ತಿಳಿಸುತ್ತದೆ.
  • 15 ವರ್ಷಗಳವರೆಗೆ ಅಧ್ಯಯನ ಮಾಡಿದ ಖಾರವೇಲನು 23 ನೇ ವರ್ಷದಲ್ಲಿ ರಾಜನಾದ.
  • ಶಾತವಾಹನ ಶಾತಕರ್ಣಿಯ ದಾಳಿಯನ್ನು ತಡೆಗಟ್ಟಿದನು.
  • ರಾಷ್ಟ್ರೀಕರು, ಮೂಷಿಕರು, ಮೋಜಕರನ್ನು ಸೋಲಿಸಿದನು.
  • ಖಾರವೇಲನು ರಾಜಸೂಯ ಯಾಗ ಮಾಡಿದನು.
  • ಬ್ರಹಸ್ಪತಿ ಮಿತ್ರನನ್ನು ಸೋಲಿಸಿ ಜೀನ ಪ್ರತಿಮೆಯನ್ನು ಪಡೆದನು. ಜೈನ ಧರ್ಮ ಶಾಸ್ತ್ರಗಳನ್ನು ರಚಿಸಲು ಪ್ರೇರಣೆ ನೀಡಿದನು.

12) ಒಂದನೇ ಚಂದ್ರಗುಪ್ತ (ಕ್ರಿ.ಶ..0.320-335):

  • ಗುಪ್ತರ ಪಥಮ ಸಾರ್ವಭೌಮ ದೊರೆ ಒಂದನೇ ಚಂದ್ರಗುಪ್ತ.
  • Iನೇ ಚಂದ್ರಗುಪ್ತ ಗುಪ್ತ ವಂಶದ ಸ್ಥಾಪಕ ಶ್ರೀಗುಪ್ತನ ಮಗ.
  • ಈತನು ಮಾಹಾರಾಜಾದಿರಾಜ ಎಂಬ ಬಿರುದು ಹೊಂದಿದ್ದನು.
  • ಒಂದನೇ ಚಂದ್ರಗುಪ್ತ ಲಿಚ್ಚವಿ ರಾಜಕುಮಾರಿ, ಕುಮಾರದೇವಿ ಯನ್ನು ವಿವಾಹವಾಗಿದ್ದರಿಂದ ನೇಪಾಳ ಈತನ ವಶಕ್ಕೆ ಬಂದಿತು. “ದೇವಿ ಚಂದ್ರಗುಪ್ತ’ ನಾಟಕವು ಈ ವಿವಾಹವನ್ನು ಪ್ರಸ್ತಾಪಿಸಿದೆ.
  • ಪಾಟಿಲೀಪುತ್ರ ಈತನ ರಾಜಧಾನಿಯಾಗಿತ್ತು.
  • ಬಂಗಾಳ, ಬಿಹಾರ, ಔದ್ ಹಾಗೂ ಉತ್ತರ ಪ್ರದೇಶಗಳು ಈತನ ಆಳ್ವಿಕೆಗೆ ಒಳಪಟ್ಟಿದ್ದವು.
  • ಚಂದ್ರಗುಪ್ತನು ಅಧಿಕಾರಕ್ಕೆ ಬಂದ ಸವಿನೆನಪಿಗೆ ಕ್ರಿ.ಶ. 320 ‘ಗುಪ್ತ ಶಕೆ’ಯನ್ನು ಜಾರಿಗೆ ತಂದನು.

13) ಸಮುದ್ರ ಗುಪ್ತ (ಕ್ರಿ.ಶ.335-375):

  • ಸಮುದ್ರಗುಪ್ತ ಗುಪ್ತರ ಅತ್ಯಂತ ಪ್ರಸಿದ್ಧ ಅರಸ.
  • ಈತನು ಒಂದನೇ ಚಂದ್ರಗುಪ್ತ ಹಾಗೂ ಕುಮಾರದೇವಿ ಮಗ
  • ಈತನ ಬಗ್ಗೆ ತಿಳಿಸುವ ಶಾಸನ “ಅಲಹಾಬಾದ್‌ನ ಸ್ಥಂಭ ಶಾಸನ. ಇದು ನಾಗರಿ ಲಿಪಿಯಲಿದ್ದು, ಸಂಸ್ಕೃತ ಭಾಷೆಯಲ್ಲಿದೆ. 33 ಸಾಲುಗಳಿಂದ ಒಂದೇ ವಾಕ್ಯದಿಂದ ಕೂಡಿದೆ.
  • ಸಮುದ್ರಗುಪ್ತನ ಪಟ್ಟದರಾಣಿ ದತ್ತಾದೇವಿ,
  • ಸಮುದ್ರಗುಪ್ತನು ಬರೆದ ಕೃತಿ ಕೃಷ್ಣ ಚರಿತೆ
  • ಸಮುದ್ರಗುಪ್ತನ ಬಿರುದು ‘ಭಾರತದ ನೆಪೋಲಿಯನ್’ ಎ೦ದು ಇತಿಹಾಸಕಾರ ವಿ.ಎಸ್.ಸ್ಮಿತ್ ಉಲ್ಲೇಖಿಸಿದ್ದಾರೆ.
  • ಸಮುದ್ರಗುಪ್ತನು ಕಚ್ ಮಾದರಿಯ ನಾಣ್ಯಗಳನ್ನು ಜಾರಿಗೆ ತಂದಿದ್ದನು.
  • ಸಮುದ್ರಗುಪ್ತನ ನಾಣ್ಯಗಳ ಮೇಲೆ, ವೀಣೆ, ಅಶ್ವ, ಶಂಖ, ಪದ್ಯ, ಗಧ, ಚಕ್ರಗಳನ್ನು ಮುದ್ರಿಸಲಾಗಿತ್ತು.
  • ಸಮುದ್ರಗುಪ್ತನ ಮಕ್ಕಳು-2ನೇ ಚಂದ್ರಗುಪ್ತ ಮತ್ತು ರಾಮಗುಪ್ತ.

ಉತ್ತರ ಭಾರತದ ದಂಡಯಾತ್ರೆಗಳು :

  • ಸಮುದ್ರಗುಪ್ತನು ಆರ್ಯಾವರ್ತ (ಉತ್ತರ ಭಾರತ) ದ ದಂಡ ಯಾತ್ರೆ ಕೈಗೊಂಡು, 9 ಅರಸರನ್ನು ಸೋಲಿಸಿದನು.
  • ಆಸ್ಸಾಂ – ಬಲವರ್ಮ (ಅಸ್ಸಾಂ)
  • ಅಹಿಚ್ಛೇತ್ರದ – ಅಚ್ಯತ್‌ (ಉತ್ತರ ಪ್ರದೇಶ)
  • ಶಿವನಂದಿ – ನಂದಿ (ಉತ್ತರ ಪ್ರದೇಶ)
  • ಪದ್ಮಾವತಿ – ನಾಗಸೇನ (ಮಧ್ಯಪ್ರದೇಶ)
  • ಮುಷ್ಕರ – ಚಂದ್ರವರ್ಮನ್ (ಪಶ್ಚಿಮ ಬಂಗಾಳ)
  • ಮಥುರಾ- ಗಣಪತಿ ನಾಗ (ಉತ್ತರ ಪ್ರದೇಶ)
  • ನಾಗಪ್ರದೇಶ – ನಾಗದೊರೆ (ಮಧ್ಯಪ್ರದೇಶ)
  • ಉತ್ತರ ಪ್ರದೇಶ – ಮತ್ತಿಲ (ಉತ್ತರ ಪ್ರದೇಶ)
  • ವಾಕಾಟಕ – ರುದ್ರದೇವ (ಮಧ್ಯಪ್ರದೇಶ)

ದಕ್ಷಿಣ ಭಾರತದ ದಂಡಯಾತ್ರೆಗಳು :

  • ಕೋಸಲ – ಮಹೇಂದ್ರ (ಮಧ್ಯಪ್ರದೇಶ)
  • ಮಹಾಕಾಂತಾರ – ವ್ಯಾಘ್ರರಾಜ (ಓದಿಸಾ)
  • ಕೌರಾಲ -ಮಾಂತರಾಜ (ಓಡಿಸಾ)
  • ಯರಂಡಪಲ- ದಮನ (ಆಂಧ್ರಪ್ರದೇಶ)
  • ಕೊಟ್ಟೂರು ಸ್ವಾಮಿದತ್ತ (ಆಂಧ್ರಪ್ರದೇಶ)
  • ಷಷ್ಠಿಪುರ – ಮಹೇಂದ್ರ (ಆಂಧ್ರಪ್ರದೇಶ)
  • ಕಂಚಿ- ವಿಷ್ಣುಗೋಪ (ತಮಿಳುನಾಡು)
  • ವೆಂಗಿ- ಹಸ್ತಿವರ್ಮನ್ (ಆಂಧ್ರಪ್ರದೇಶ)
  • ದೇವರಾಷ್ಟ್ರ-ಕುಬೇರ (ಆಂಧ್ರಪ್ರದೇಶ)
  • ಪಲ್ಲಕ್ಕಾ-ಉಗ್ರಸೇನ (ಆಂಧ್ರಪ್ರದೇಶ)
  • ಕುಸ್ಥಾಲಾಪುರ- ಧನಂಜನ (ತಮಿಳುನಾಡು)
  • ಅವಮುಕ್ತ – ನೀಲರಾಜ (ಆಂಧ್ರಪ್ರದೇಶ)

ಗಡಿ ರಾಜ್ಯಗಳ ಮೇಲೆ ಯುದ್ಧ :

  • ನೇಪಾಳ – ನೇಪಾಳ
  • ದವಕ – – ಆಸ್ಸಾಂ
  • ಕಾಮರೂಪ – ಆಸ್ಸಾಂ –
  • ಕಾರ್ತಿಪುರ- ಪಂಜಾಬ್

ಅಡವಿ ರಾಜ್ಯಗಳ ಮೇಲೆ ಯುದ್ಧ :

  • ಮಾಳ್ವ – ಮಧ್ಯಪ್ರದೇಶ
  • ಯೌಧೇಯರು – ಪಂಜಾಬ್
  • ಕಾಕರು – ಮಧ್ಯಪ್ರದೇಶ
  • ಖಾರಪರಿಕರು – ಮಧ್ಯಪ್ರದೇಶ
  • ಅಬಿದರು – – ಮಧ್ಯಪ್ರದೇಶ
  • ಅಜುನಾಯ್ಕರು – ಉತ್ತರಪ್ರದೇಶ
  • ಕಾಬೂಲಿನ ದೊರೆ ದೇವಪುತ್ರಗಾಹಿ ಸಮುದ್ರಗುಪ್ತನ ರಾಯ ಭಾರಿಯನ್ನು ಒಪ್ಪಿಕೊಂಡನು.
  • ಸಿಲೋನಿನ ಮೇಘವರ್ಮ ಸಮುದ್ರಗುಪ್ತನಿಗೆ ಗೌರವ ಸಲ್ಲಿಸಿ ದನು.

14) 2ನೇ ಚಂದ್ರಗುಪ್ತ (ಕ್ರಿ.ಶ 380-419) :

  • ದತ್ತಾದೇವಿ ಮತ್ತು ಸಮುದ್ರಗುಪ್ತನ ಮಗ,
  • ದೇವಶ್ರೀ ಮತ್ತು ದೇವಗುಪ್ತ ಎಂಬ ಹೆಸರುಗಳನ್ನು ಹೊಂದಿದನು.
  • ಈತನ ಸಾಧನೆಯನ್ನು ತಿಳಿಸುವ ಶಾಸನ ಮಹೌಲಿಸ್ತಂಭ ಶಾಸನ ಲೋಹ ಶಾಸನವಾಗಿದೆ, ಇದು 23.8 ಅಡಿ, ಎತ್ತರವಾಗಿದೆ.
  • 2ನೇ ಚಂದ್ರಗುಪ್ತನ ಪ್ರಸಿದ್ಧ ಬಿರುದು-ವಿಕ್ರಮಾದಿತ್ಯ.
  • ಶಕರ ಅರಸ ರುದ್ರಸಿಂಹನನ್ನು ಸಂಹರಿಸಿ ‘ಶಿಕಾರಿ’ ಎಂಬ ಬಿರುದು ಪಡೆದನು.
  • 2ನೇ ಚಂದ್ರಗುಪ್ತ ನಾಗ ರಾಜಕುಮಾರಿ ಕುಬೇರಿನಾಗಳನ್ನು ವಿವಾಹವಾದನು. ಮುಂದೆ ಕುಬೇರನಾಗಳಿಗೆ ಜನಿಸಿದ ಮಗಳಾದ ಪ್ರಭಾವತಿ ಗುಪ್ತಳನ್ನು ವಾಕಾಟಕರ ಅರಸ 2ನೇ ರುದ್ರಸೇನನಿಗೆ ವಿವಾಹ ಮಾಡಿಕೊಟ್ಟನು.
  • 2ನೇ ಚಂದ್ರಗುಪ್ತನು ಪ್ರಶಾಂತ ಸ್ವಭಾವ ಶೌರ್ಯಗಳಿಂದ ಅವನಿಗೆ “ಸಹಸಾಂಕ’ ಎಂಬ ಬಿರುದು ಪಡೆದನು.
  • ಈತನ ಆಡಳಿತ ಕಾಲವನ್ನು ‘ಸುವರ್ಣಯುಗ’ವೆಂದು ಕರೆಯುತ್ತಾರೆ.
  • ಬಂಗಾಳ ವಂಗ ಅರಸನ ಒಕ್ಕೂಟದ ಮೇಲೆ ದಾಳಿ ಮಾಡಿ, ಬಂಗಾಳವನ್ನು ವಶಪಡಿಸಿಕೊಂಡನು.

ಈತನ ಆಸ್ಥಾನದ ನವರತ್ನರು ರಚಿಸಿದ ಕೃತಿಗಳು

1) ಕಾಳಿದಾಸ – ಮಾಳವಿಕಾಗ್ನಿಮಿತ್ರ, ಕುಮಾರ ಸಂಭವ, ಅಭಿಜ್ಞಾನ ಶಾಕುಂತಲ, ಮೇಘಧೂತ.
2) ವರರುಚಿ ವ್ಯಾಕರಣ
3)
ಥನ್ವಂತರಿಆರ್ಯುವೇದ ನಿಘಂಟು
4)
ವರಾಹಮಿಹರಬೃಹತ್ಸಂಹಿತೆ, ಬೃಹತ್ಜಾತಕ,
5)
ಶಂಕು – ಶಿಲ್ಪಶಾಸ್ತ್ರ
6)
ಅಮರಸಿಂಹ – ಅಮರಕೋಶ
7)
ಕ್ಷಪಣಕ – ಜ್ಯೋತಿಷಶಾಸ್ತ್ರ
8)
ವೇತಾಲಭಟ್ಟಕಥೆ ಮತ್ತು ಕಾವ್ಯಗಳು
9)
ಘಟಕರ್ಪರ – ಘಟಕರ್ಪರ ಕಾವ್ಯ

  • 2ನೇ ಚಂದ್ರಗುಪ್ತನ ಆಸ್ಥಾನಕ್ಕೆ ಭೇಟಿ ನೀಡಿದ ಚೀನಾದ ಯಾತ್ರಿಕ ಫಾಹಿಯಾನ್, ಈತನ ರಚಿಸಿದ ಕೃತಿ ‘ಫೋ-ಕೊಕಿ’, ಭೂ ಮಾರ್ಗದ ಮೂಲಕ ಭಾರತಕ್ಕೆ ಕ್ರಿ.ಶ.400ರಲ್ಲಿ ಬಂದು, ಫಾಹಿಯಾನನು ಕ್ರಿ.ಶ. 411 ರಲ್ಲಿ ತನ್ನ ದೇಶಕ್ಕೆ ಮರಳಿದನು.
  • 2ನೇ ಚಂದ್ರಗುಪ್ತನ ಆಡಳಿತ ಮಂಡಳಿ :

1) ವಿನಯಸ್ಥಿತಿ ಸ್ಥಾಪಕ – ಜನಗಣತಿ ಇಲಾಖೆ
2) ಮಹಾಪ್ರತಿಹಾರ – ಅರಮನೆ ಮೇಲಿನ ಭಾಗ
3) ದಂಡಪನಾಧೀಕರಣ – ಪೊಲೀಸ್ ಮುಖ್ಯಸ್ಥ

  • ಈತನ ನಾಣ್ಯಗಳ ಮೇಲೆ ಲಕ್ಷ್ಮೀ, ಗರುಡ, ಕುದುರೆ ಚಿತ್ರಗಳನ್ನು ಕಾಣಬಹುದು.

15) ಕುಮಾರಗುಪ್ತ (ಕ್ರಿ.ಶ. 414-455) :

  • ಈತನು 2ನೇ ಚಂದ್ರಗುಪ್ತನ ನಂತರ ಅಧಿಕಾರಕ್ಕೆ ಬಂದನು.
  • ಕುಮಾರಗುಪ್ತನು ಜುನಾಗಢ, ಜೈಯಿಸಿದನು,
  • ವ್ಯಾಘ್ರಬಲ, ಪರಾಕ್ರಮ, ಮಹೇಂ ದ್ರಾದಿತ್ಯ ಎಂಬ ಬಿರುದುಗಳನ್ನು ಹೊಂ ದಿದನು.
  • ಈತನ ಆಸ್ಥಾನದ ಮಂತ್ರಿ ನರಸಿಂಹ ಗುಪ್ತ.
  • ಈತನು ಕ್ರಿ.ಶ. 420ರಿಂದ 427ರ ಅವಧಿಯಲ್ಲಿ ನಳಂದಾ ವಿಶ್ವ ವಿದ್ಯಾಲಯವನ್ನು ಕಟ್ಟಿಸಿದನು.

16)1ನೇ ಪ್ರವರಸೇನ (ಕ್ರಿ.ಶ. 275-335):

  • ಈತನು ವಾಕಾಟಕರ ಪ್ರಸಿದ್ಧ ದೊರೆ.
  • 1 ನೇ ಪ್ರವರಸೇನನು ನಾಲ್ಕು ಬಾರಿ ಅಶ್ವಮೇಧಯಾಗ ಮಾಡಿದನು.
  • ಈತನ ಬಿರುದು ‘ಸಾಮ್ರಾಟ್ ವಾಕಾಟಕ
  • ಈತನು ಆಚರಿಸಿದ ಯಜ್ಞಗಳು
    1) ಅಶ್ವಮೇಧ 2) ವಾಜಪೇಯಿ
    3) ಅಗ್ನಿಸೋಮ 4) ಅತಿರಾತ್ರ

17) CADER JOEN (ಕ್ರಿ.ಶ... 588-605):

  • ಪ್ರಭಾಕರ ವರ್ಧನು `ವರ್ಧನ ಸಾಮ್ರಾಜ್ಯ’ದ ಸ್ಥಾಪಕ.
  • ಈತನ ಬಿರುದುಗಳು-‘ಪರಮ ಭಟ್ಟಾರಕ’, ‘ಮಹಾ ರಾಜಾಧಿರಾಜ’.
  • ಈತನು ಹೂಣರ ಹಾಗೂ ಲಾಟರನ್ನು ಸೋಲಿಸಿದನು.
  • ರಾಜ್ಯವನ್ನು ವಿಸ್ತರಿಸಿ ‘ಪ್ರತಾಪಶೀಲ’ ಎಂಬ ಬಿರುದು ಪಡೆದನು.
  • ಪ್ರಭಾಕರ ವರ್ಧನನ ರಾಣಿ-ಯಶೋಮತಿ, ಮಕ್ಕಳು- ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀ,
  • ಪ್ರಭಾಕರ ವರ್ಧನ ತನ್ನ ಮಗಳನ್ನು ಮೌಖರಿ ವಂಶದ ಗೃಹವರ್ಮನಿಗೆ ಕೊಟ್ಟು ವಿವಾಹ ಮಾಡಿದನು.

18) ಹರ್ಷವರ್ಧನ ( ಕ್ರಿ.ಶ. 606-647):

  • ವರ್ಧನ ಸಾಮ್ರಾಜ್ಯದ ಅತ್ಯಂತ ಪ್ರಸಿದ್ಧ ಅರಸ.
  • ಹರ್ಷವರ್ಧನ ಶಿಲಾದಿತ್ಯ, ಪ್ರಿಯದರ್ಶಿನಿ, ಉತ್ತರಾಪಥೇಶ್ವರ, ಪರಮಭಟ್ಟಾರಕ ಎಂಬ ಬಿರುದುಗಳನ್ನು ಹೊಂದಿದ್ದನು.
  • ಕ್ರಿ.ಶ.606ರಲ್ಲಿ ‘ಹರ್ಷಶಕೆ’ಯನ್ನು ಹರ್ಷವರ್ಧನನು ಆರಂಭಿಸಿ ದರು.
  • ಬಾಣನ ಹರ್ಷಚರಿತೆ, ಹೂಯೆನ್ ಸ್ಟ್ಯಾಂಗ್‌ನ ‘ಸಿ-ಯು-ಕಿ’ ಕೃತಿಗಳು ಹರ್ಷವರ್ಧನನ ಕುರಿತು ಮಾಹಿತಿ ನೀಡುತ್ತವೆ.
  • ಹರ್ಷವರ್ಧನನಿಗೆ ಸಹಾಯ ಮಾಡಿದ ಕಾಮರೂಪದ ಅರಸ ಭಾಸ್ಕರವರ್ಮ
  • ಹರ್ಷವರ್ಧನನ ಮಂತ್ರಿ ಬಂಡಿ
  • ಹರ್ಷವರ್ಧನನ ಆಸ್ಥಾನಕ್ಕೆ ಭೇಡಿ ನೀಡಿದ ಚೀನಾದ ಯಾತ್ರಿಕ
  • ಹೂಯೆನ್‌ಸ್ಟ್ಯಾಂಗ್ (ಕ್ರಿ.ಶ. 600-664) – ಹರ್ಷವರ್ಧನನು ತನ್ನ ಮಗಳನ್ನು ಗುಜರಾತಿನ ಧ್ರುವಸೇನನಿಗೆ ಕೊಟ್ಟು ವಿವಾಹ ಮಾಡಿದನು.
  • ನರ್ಮದಾ ನದಿ ತೀರದ ಯುದ್ಧ ಕ್ರಿ.ಶ. 634-35ರಲ್ಲಿ 2ನೇ ಪುಲಕೇಶಿ ಹಾಗೂ ಹರ್ಷವರ್ಧನನ ನಡುವೆ ಜರುಗಿತು. ಈ ಯುದ್ಧದಲ್ಲಿ ಹರ್ಷವರ್ಧನ ಸೋತು ‘ಪರಮೇಶ್ವರ’ ಎಂಬ ಬಿರುದನ್ನು ಪುಲಕೇಶಿಗೆ ಬಿಟ್ಟುಕೊಟ್ಟನು.
  • ಪುಲಕೇಶಿ ಮರಣದ ನಂತರ ಹರ್ಷವರ್ಧನನು ಕ್ರಿ.ಶ. 644 ರಲ್ಲಿ ದಕ್ಷಿಣ ಭಾರತದ ‘ಗಂಜಾಂ ಎಂಬ ಪ್ರದೇಶವನ್ನು ವಶಪಡಿಸಿಕೊಂಡನು.
  • ಹರ್ಷನ ಆಸ್ಥಾನಕ್ಕೆ ಚೀನಾ ಯಾತ್ರಿಕ ಹೂಯೆನ್‌ಸ್ಟ್ಯಾಂಗ್ ಭೇಟಿ ನೀಡಿದನು.
  • ಹರ್ಷವರ್ಧನನ ಕುರಿತು ತಿಳಿಸುವ ಶಾಸನಗಳು, ‘ಬನ್ನಖೇರ, ಮಧುಬನ್ ಶಾಸನಗಳು.
  • ಕನೋಜಿನ ಧಾರ್ಮಿಕ ಮಹಾಸಭೆ ಕ್ರಿ.ಶ. 643 ರಲ್ಲಿ ನಡೆಯಿತು. ಇದರಲ್ಲಿ 20 ಅರಸರು, 3000 ಬ್ರಾಹ್ಮಣರು ಭಾಗವಹಿಸಿದರು.
  • ಈತನ ಆಳ್ವಿಕೆಯ ಕಾಲದಲ್ಲಿ ಪ್ರಯಾಗ ಮಹಾಸಭೆ ಕ್ರಿ.ಶ. 643 ರಲ್ಲಿ ಜರುಗಿತು.
  • ಹರ್ಷವರ್ಧನನು ಬರೆದ ಕೃತಿಗಳು -ರತ್ನಾವಳಿ, ಪ್ರಿಯದರ್ಶಿಕಾ, ನಾಗಾನಂದ.
  • ಹರ್ಷವರ್ಧನನು ನಳಂದ ವಿಶ್ವವಿದ್ಯಾಲಯಕ್ಕೆ ಸಹಾಯ ಧನ ನೀಡಿದನು.
  • ಕ್ರಿ.ಶ. 647 ರಲ್ಲಿ ಹರ್ಷವರ್ಧನನು ಮರಣ ಹೊಂದಿದನು.

19) ಒಂದನೇ ಮಹೇಂದ್ರವರ್ಮ(ಕ್ರಿ.ಶ. 600-640):

  • ಈತನು ಕಂಚಿ ಪಲ್ಲವರ ಪ್ರಸಿದ್ಧ ದೊರೆ.
  • ಒಂದನೇ ಮಹೇಂದ್ರವರ್ಮನು ಪರಾಕ್ರಮಿಯೂ, ಕಲೆ, ಸಾಹಿತ್ಯ, ಧರ್ಮಗಳ ಉದಾರ ಪೋಷಕನಾಗಿದ್ದನು.
  • ಈತನು ಮೂಲತಃ ಜೈನ ಧರ್ಮೀಯನಾಗಿದ್ದನು. ಅಪ್ಪಾರ ಎನ್ನುವ ಗುರುವಿನ ಸಹಾಯದಿಂದ ಶೈವ ಧರ್ಮವನ್ನು ಸ್ವೀಕರಿಸಿದನು.
  • ಮಹಾಬಲಿಪುರಂ, ಕಂಚಿ, ತಿರುಚ್ಛಿ, ವಲ್ಲಂ, ದಳವಾನುರು ಮಹೇಂದ್ರವಾಡಿಗಳಲ್ಲಿ ಶಿವ, ಬ್ರಹ್ಮ ಮತ್ತು ವಿಷ್ಣು ದೇವಾಲ ಯಗಳನ್ನು ನಿರ್ಮಿಸಿದ್ದನು.
  • ಗುಪ್ತರ ಪ್ರಭಾವತಿ ಗುಪ್ತಾಳನನ್ನು ಈತನು ವಿವಾಹಯಾಗಿದ್ದನು.
  • ಈತನು ಬರೆದ ಕೃತಿ ‘ಮತ್ತವಿಲಾಸ ಪ್ರಹಸನ’ ಮತ್ತು ‘ಭಗವದುಜ್ಜರೇಯಂ’ ಎಂಬ ಕೃತಿಗಳನ್ನು ಬರೆದನು.
  • ಮಹೇಂದ್ರ ವರ್ಮನು ಸಂಗೀತ ಗುರು – ರುದ್ರಾಚಾರ್ಯ
  • ಈತನು ಪರಿವೀಣಾ ವಾದ್ಯವನ್ನು ನುಡಿಸಲು ಪ್ರವೀಣನಾಗಿದ್ದನು.
  • ಮಹೇಂದ್ರ ಮಂಗಲ ಮತ್ತು ಮಹೇಂದ್ರವಾಡಿ ಎಂಬ ನಗರಗಳನ್ನು ಕಟ್ಟಿಸಿದನು.
  • ಈತನು ಕ್ರಿ.ಶ. 640 ರಲ್ಲಿ ಮರಣ ಹೊಂದಿದನು.

20) ಬಾಬರ(ಕ್ರಿ.ಶ..-1526-1530) :

  • ಮೊಘಲ್ ಸಾಮ್ರಾಜ್ಯದ ಸ್ಥಾಪಕ – ಬಾಬರ
  • ಬಾಬರನ ಮೂಲ ಹೆಸರು ಜಾಹಿರುದ್ದೀನ ಮಹಮ್ಮದ ಬಾಬರ
  • ತಂದೆ-ಉಮರಶೇಖ್ ಮಿರ್ಜಾ (ತೈಮೂರನ ವಂಶಸ್ಥ)
  • ತಾಯಿ-ಕುತ್ತುಗ್‌ನಿಗಾ‌ ಖಾನಂ (ಚೆಂಗೀಸ್‌ಖಾನನ ವಂಶಸ್ಥಳು)
  • ಬಾಬರ್ ಕ್ರಿ.ಶ. 1483 ಫೆಬ್ರವರಿ – 14ರಂದು ಫರ್ಫಾನ್ ಎಂಬಲ್ಲಿ ಜನಿಸಿದನು.
  • ಕ್ರಿ.ಶ 1494 ರಲ್ಲಿ ತಂದೆಯ ಮರಣದ ನಂತರ ಬಾಬರ್ ಫರ್ಘಾನ್‌ದ ಮುಖ್ಯಸ್ಥನಾದನು.
  • ಕ್ರಿ.ಶ. 1497 ರಲ್ಲಿ ಸಮರಖಂಡವನ್ನು ವಶಪಡಿಸಿಕೊಂಡು ಕೇವಲ 100 ದಿನಗಳ ಆಡಳಿತ ಮಾಡಿದನು.
  • ಬಾಬರನ ಚಿಕ್ಕಪ್ಪ ಉಲುಘಬೇಗ್‌ನ ಮರಣದ ನಂತರ ಕಾಬೂಲ್ ದೊರೆಯಾದನು.
  • ಬಾಬರ್ ಕ್ರಿ.ಶ.1519 ರಲ್ಲಿ ಭಾರತದ ಕಡೆಗೆ ದಾಳಿಯನ್ನು ಪ್ರಾರಂಭಿಸಿದನು.
  • ಕ್ರಿಶ. 1526 ಏಪ್ರಿಲ್-21ರಂದು ಮೊದಲನೇ ಪಾಣಿಪತ್‌ ಕದನ ಬಾಬರ್ ಮತ್ತು ಇಬ್ರಾಹಿಂ ಲೋಧಿಯ ನಡುವೆ ನಡೆಯಿತು. ಈ ಯುದ್ಧದಲ್ಲಿ ಲೋಧಿ ಸೋತು ಕೊಲೆಯಾದನು.
  • ಒಂದನೇ ಪಾಣಿಪತ್ ಕದನವು ಭಾರತದಲ್ಲಿ ಮೊಘಲರ ಅಧಿಪತ್ಯಕ್ಕೆ ತಳಹದಿ ಹಾಕಿತು.
  • ಈ ಯುದ್ಧದ ಬಳಿಕ ಬಾಬರನು ‘ಸುಲ್ತಾನ್’ ಎಂಬ ಪದವಿ ಕಿತ್ತ ಹಾಕಿ ‘ಬಾದಶಹ’ ಎಂಬು ಬಿರುದು ಧರಿಸಿದನು.
  • ಕ್ರಿಶ. 1527-ರಲ್ಲಿ ಕಣ್ವ ಕಾಳಗದಲ್ಲಿ ಮೇವಾರದ ಅರಸ ರಾ ಸಂಗ್ರಾಮನನ್ನು ಸೋಲಿಸಿದನು.
  • ಕ್ರಿ.ಶ.1528-ರಲ್ಲಿ ಚಂದೇರಿಕಾಳಗದಲ್ಲಿ ಅರಸ ಮೇದಿನಿ ರಾಯನನ್ನು ಸೋಲಿಸಿದನು. ಈತ ರಾಣಾಸಂಗ್ರಾಮನಿಗೆ ಸಹಯ ಮಾಡಿದ್ದನು.
  • ಕ್ರಿ.ಶ.-1529 ರಲ್ಲಿ ಘೋಗ್ರಾ ಎಂಬ ಕಾಳಗದಲ್ಲಿ ಇಬ್ರಾಹಿಂ ಲೋಧಿಯ ಸಹೋದರ ಮಹ್ಮದ ಲೋದಿಯನ್ನು ಸೋಲಿಸಿದನು.
  • ಕ್ರಿ.ಶ. 1530 ರಲ್ಲಿ ಬಾಬರ್ ಮರಣ ಹೊಂದಿದನು. ಈತನ ಶವವನ್ನು ಮೊದಲು ಆಗ್ರಾದ ಅರಮ್ ಪ್ರದೇಶದಲ್ಲಿ ಹೂಳಲಾಗಿತ್ತು. ಬಳಿಕ ಕಾಬೂಲ್‌ನಲ್ಲಿ ಸಮಾಧಿ ನಿರ್ಮಿಸ ಲಾಯಿತು.
  • ಬಾಬರನು ಭಾರತಕ್ಕೆ ತೋಪನ್ನು ಹಾಗೂ ಗುಲಾಬಿ ಹೂವನ್ನು ಪರಿಚಯಿಸಿದ ಮೊದಲ ವ್ಯಕ್ತಿ.

21) ಹುಮಾಯುನ್ (ಕ್ರಿ.ಶ.. 1530- 1540):

  • ಮಧ್ಯಯುಗೀನ ಭಾರತದ ಇತಿಹಾಸದಲ್ಲಿ ಅದೃಷ್ಟವಂತ ಎಂಬ ಹೆಸರಿನೊಂದಿಗೆ ದುರದೃಷ್ಟಕರವಾಗಿ ಆಡಳಿತ ಮಾಡಿದ ಅರಸ ಹುಮಾಯುನ್ ಆಗಿದ್ದಾನೆ.
  • ಹುಮಾಯುನ್ ಕ್ರಿ.ಶ. 1508 ಮಾರ್ಚ್ 6ರಂದು ಕಾಬೂಲ್‌ನಲ್ಲಿ ಜನಿಸಿದನು.
  • ಈತನ ಪೂರ್ಣ ಹೆಸರು ನಾಸಿರುದ್ದೀನ್ ಮಹದ ಹುಮಾಯುನ್.
  • ಬಾಬರ ಮರಣದ ನಂತರ ಕ್ರಿ.ಶ. 1530 ಡಿಸೆಂಬರ್- 30 ರಂದು ಪಟ್ಟವೇರಿದನು.
  • ಆರಂಭದಲ್ಲಿ ಹುಮಾಯುನ್ ಅಪಘನ್ನರನ್ನು ಮತ್ತು ರಜಪೂತನ್ನು ಹತ್ತಿಕ್ಕಿದನು.
  • ಕ್ರಿ.ಶ.-1532 ರಲ್ಲಿ ಹುಮಾಯುನ್ ಮತ್ತು ಮಹದ ಲೋಧಿಯ ಮಧ್ಯ ‘ದೌರಾ’ ಕಾಳಗ ನಡೆಯಿತು. > ಈ ಕಾಳದಲ್ಲಿ ಮಹ್ಮದ ಲೋದಿ ಸೋಲನ್ನು ಅನುಭವಿಸಿದನು.
  • ಕ್ರಿ.ಶ.-1535-36 ರಲ್ಲಿ ಹುಮಾಯುನ್ ಮಾಳ್ವದ ಬಹದ್ದೂರ್ ಷಾನನ್ನು ಸೋಲಿಸಿದನು.
  • ಕ್ರಿ.ಶ. 1539 ರಲ್ಲಿ ಹುಮಾಯುನ್ ಹಾಗೂ ಶೇರಷಾ ಮಧ್ಯ ಚೌಸಾ ಎಂಬಲ್ಲಿ ಕಾಳಗ ನಡೆಯಿತು. ಈ ಕದನದಲ್ಲಿ ಹುಮಾ ಯುನ್ ಸೋತು ಗಂಗಾನದಿಗೆ ಹಾರಿದನು. ಜಲಗಾರ ನಿಜಾಮನ ಸಹಾಯದಿಂದ ಬದುಕುಳಿದನು.
  • ಕ್ರಿ.ಶ.-1540ರಲ್ಲಿ ಹುಮಾಯುನ್ ಹಾಗೂ ಈ ಶೇರ್‌ಷಾನ್ ಮಧ್ಯ ಕನೌಜ್ ಅಥವಾ ಬಿಲ್‌ಗ್ರಾಮ್ ಕದನ ನಡೆಯಿತು. ಈ ಯುದ್ಧದಲ್ಲಿ ಹುಮಾಯುನ್ ಸಂಪೂರ್ಣವಾಗಿ ಸೋತು ಅಲೆ ಮಾರಿಯಾದನು.
  • ಹುಮಾಯುನ್ ಕ್ರಿ.ಶ.-1541ರಲ್ಲಿ ಹಮೀದಾಬಾನು ಬೇಗಂಳನ್ನು ವಿವಾಹವಾದನು.
  • ಕ್ರಿ.ಶ. 1542ರಲ್ಲಿ ಅಮರಕೋಟೆಯ ರಜಪೂತ ನಾಯಕ ವೀರಸಾಲಿನ ಮನೆಯಲ್ಲಿ ಅಕ್ಷರ ಜನಿಸಿದನು.
  • ಕ್ರಿಶ. 1543ರಲ್ಲಿ ಹುಮಾಯುನ್ ಪರ್ಷಿಯಾದ ದೊರೆ ಕತಹಮಹಸ್ತನ ಸಹಾಯದಿಂದ ಸಹೋದರ ಕಾಮರಾನನ್ನು ಸೋಲಿಸಿ, ಕಾಬೂಲ್‌ನ್ನು ವಶಪಡಿಸಿಕೊಂಡನು.
  • ಕ್ರಿ.ಶ. 1555ರಲ್ಲಿ ಹುಮಾಯುನ್ ಲಾಹೋರನ್ನು ವಶಪಡಿಸಿಕೊಂಡನು.
  • ಕ್ರಿ.ಶ1555 ಜೂನ್ 22ರಂದು ಸರಹಿಂದ್’ ಕಾಳಗದಲ್ಲಿ ಸಿಕಂದರ್‌ಷಾನ್‌ನನ್ನು ಸೋಲಿಸಿ, ಪಂಜಾಬ್‌ವನ್ನು ವಶಪಡಿಸಿಕೊಂಡನು.
  • ಕ್ರಿ.ಶ-1556 ರಲ್ಲಿ ತಾನೇ ನಿರ್ಮಿಸಿದ ‘ದೀನಪನ್ನಾ’ ಎಂಬ ಗ್ರಂಥಾಲಯದ ಮೆಟ್ಟಿಲು ಮೇಲಿಂದ ಬಿದ್ದು ಮರಣ ಹೊಂದಿದನು.
  • ಹುಮಾಯುನ್ ಸಮಾಧಿ ದೆಹಲಿಯಲ್ಲಿದೆ.
  • ಹುಮಾಯುನ್‌ನ ಆತ್ಮಚರಿತ್ರೆ-“ಹುಮಾಯುನ್ ನಾಮಾ’ ಇದನ್ನು ಹುಮಾಯುನ್ ಸಹೋದರಿ ಗುಲ್ಬದ್ದೀನ್ ಬೇಗಂ ರಚಿಸಿದ್ದಾಳೆ. ಹುಮಾಯುನ್‌ನಾಮಾ ಪರ್ಶಿಯನ್ ಭಾಷೆಯಲ್ಲಿದೆ.
  • ಕ್ರಿ.ಶ 1540 -1555 ರ ವರೆಗಿನ ಅವಧಿಯನ್ನು ಸೂರ ಸಂತತಿ ಯವರು ಆಡಳಿತ ಮಾಡಿದರು.

22) ಅಕ್ಬರ್ (ಕ್ರಿ.ಶ..1556-1605):

  • ಮೊಘಲ್ ಸಾಮ್ರಾಜ್ಯದ ಅತ್ಯಂತ ಪ್ರಸಿದ್ಧ ದೊರೆ.
  • ಅಕ್ಷರನ ಮೂಲ ಹೆಸರು – ಜಲಾಲುದ್ದೀನ್ ಮಹ‌
  • ತಂದೆ ಹುಮಾಯುನ್ತಾ
  • ತಾಯಿ-ಹಮೀದಾ ಬಾನು ಬೇಗಂ
  • ಅಕ್ಷರನಿಗೆ ಕ್ರಿ.ಶ 1556 ಫೆಬ್ರವರಿ 14 ರಂದು ಪಂಜಾಬದ ಕಲನೌರ ಎಂಬಲ್ಲಿ ಪಟ್ಟಾಭಿಷೇಕವಾಯಿತು.
  • ಅಕ್ಷರನ ಸಾಕು ತಾಯಿ ಮಹಲ್ ಅನಗಾ ಇವಳು ಅಕ್ಕರನ ಮೇಲೆ ಸಂಪೂರ್ಣ ನಿಯಂತ್ರವನ್ನು ಹೊಂದಿದ್ದಳು. ಇವಳು ತನ್ನ ಮಗನಾದ ಆದು ಖಾನನ್ನು ಅಧಿಕಾರಕ್ಕೆ ತರುವ ಸನ್ನಾಹ ದಲ್ಲಿದ್ದಳು.
  • ಅಕ್ಷರನ ಗುರು – ಅಬ್ದುಲ್ ಲತೀಪ್
  • ಅಕ್ಷರನ ಪ್ರಸಿದ್ಧ ರಾಣಿಯರು -1) ರುಕೈಯಾಬೇಗಂ 2)ಸಲೀಮಾ ಬೇಗಂ 3) ಜೋಧಾ ಬೇಗಂ

⏩ಅಕ್ಷರನ ದಿಗ್ವಿಜಯಗಳು

  • ಕ್ರಿಶ- 1556 ರಲ್ಲಿ ಹೇಮು ಮತ್ತು ಮೊಘಲರ ನಡುವೆ 2ನೇ ಪಾಣಿಪತ್ ಕದನ ಜರುಗಿತು. ನವೆಂಬರ್-05 ರಂದು ಈ ಕದನದಲ್ಲಿ ದೆಹಲಿಯನ್ನು ಆಳುತ್ತಿದ್ದ ಹೇಮುವನ್ನು ಅಕ್ಬರ್ ತನ್ನ ಮಾವನಾದ ಭೈರಾಂಖಾನನ ಸಹಾಯದಿಂದ ಕೋಲೆ ಮಾಡಿದನು.
  • ಕ್ರಿ.ಶ.-1561 ರಲ್ಲಿ ಮಾಳ್ವದ ಮುಖ್ಯಸ್ಥ ಬಹದ್ದೂರನ್ನು ಸೋಲಿಸಿದನು.
  • ಕ್ರಿ.ಶ.- 1561 ರಲ್ಲಿ ಚುನಾರ್ ಕೋಟೆಯ ಮೇಲೆ ದಾಳಿ ಮಾಡಿ ಖಾನ್ ಇಮಾನನ್ನು ಸೋಲಿಸಿದನು.
  • ಕ್ರಿ.ಶ. 1562 ರಲ್ಲಿ ಅಂಬರ ಕೋಟೆಯ ಮೇಲೆ ದಾಳಿ ಮಾಡಿದನು. ಆ ಸಂದರ್ಭದಲ್ಲಿ ಅಲ್ಲಿಯ ಅರಸ ಬಿಹಾರಿ ಮಹಲ್ ತನ್ನ ಮಗಳು ಜೋಧಾಬಾಯಿಯನ್ನು ಅಕ್ಷರನಿಗೆ ಕೊಟ್ಟು ವಿವಾಹ ಮಾಡಿದನು.
  • ಕ್ರಿ.ಶ.-1562 ರಲ್ಲಿ ಮರ್ತಾದ ಮೇಲೆ ದಾಳಿ ಮಾಡಿ ಅಲ್ಲಿನ ಅರಸ ಜಯಮಲ್ ನಿಂದ ವರ್ಷಾವನ್ನು ವಶಪಡಿಸಿಕೊಂಡನು. 
  • ಕ್ರಿ.ಶ.-1564 ರಲ್ಲಿ ಗೊಂಡವನದ ಮೇಲೆ ದಾಳಿ ಮಾಡಿ ರಾಣಿ ದುರ್ಗಾವತಿಯನ್ನು ಸೋಲಿಸಿದನು. ಅಲ್ಲಿ ವೀರ ನಾರಾಯಣ ಅಪ್ರಾಪ್ತ ಬಾಲಕನಾಗಿದ್ದ ಕಾರಣ ರಾಣಿ ದುರ್ಗಾದೇವಿ ಆಡಳಿತ ನಡೆಸುತ್ತಿದ್ದಳು.
  • ಕ್ರಿ.ಶ.-1567 ರಲ್ಲಿ ಮೇವಾರದ ಮೇಲೆ ದಾಳಿ ಮಾಡಿ ರಾಣಾ ಉದಯಸಿಂಗ್‌ನನ್ನು ಸೋಲಿಸಿ, ಕಾಡಿಗೆ ಅಟ್ಟಿಸಿದನು.
  • ಕ್ರಿ.ಶ.1569 ರಲ್ಲಿ ರಣಥಂಬೋರ ಕೋಟೆಯ ಮೇಲೆ ಅಕ್ಟರ್ ದಾಳಿಮಾಡಿದನು, ಅಲ್ಲಿಯ ರಜಪೂತ ಅರಸ ರಾಯ ಸುರ್ಜನಹರ ಯುದ್ಧ ಮಾಡದೇ ಶರಣಾದನು.
  • ಕ್ರಿ.ಶ.-1569 ರಲ್ಲಿ ಕಾಲಿಂಜರ ಕೋಟೆಯ ಮೇಲೆ ದಾಳಿ ಮಾಡಿ, `ರಾಜಾರಾಮಚಂದ್ರ ವಶದಲ್ಲಿದ್ದ ಕೋಟೆಯನ್ನು ವಶಪಡಿಸಿಕೊಂಡನು.

⏩ಅಶ್ವರನ ಆಡಳಿತ :

* ಅಕ್ಷರನ ಆಡಳಿತ ಮಂತ್ರಿಮಂಡಳ
* ವಕೀಲ್ ಪ್ರಧಾನಮಂತ್ರಿ
* ಮೀರಭಕ್ಷಿ – ಸೇನಾ ಮುಖ್ಯಸ್ಥ 
* ಸದರ್ – ಉಸ್- ಸದರ್- ದಾನದತ್ತಿಗಳ ಮಂತ್ರಿ
* ಖಾಜಿ- ಉಲ್ -ಖಜತ್ – ಮುಖ್ಯ ನ್ಯಾಯಾಧೀಶ
* ಖಾನ್ – ಇ – ಸಮನ್ – ಗೃಹ ಸಚಿವ
* ಮುಖಿತಾಬ್- ಧರ್ಮಾಧಿಕಾರಿ
* ದರೋಗ – ಇ – ಡಾಕಚೌಕಿ- ಬೇಹುಗಾರಿಕೆ ಮುಖ್ಯಸ್ಥ
* ಮುಶಿಫ್ – ಬಂದರು ಮುಖ್ಯಸ್ಥ
* ದರೋಗ-ಇ-ತಕ್ಷಲ್ -ಟಂಕಸಾಲೆ ಮೇಲ್ವಿಚಾರಕ

  • ಅಕ್ಟರನ ಕಂದಾಯ ಇಲಾಖೆಯಲ್ಲಿ ಜಪ್ತಿ ಅಥವಾ ಬಂದೋಬಸ್ತ ಎಂಬ ಪದ್ಧತಿ ಜಾರಿಗೆ ತಂದನು.
  • ಅಕ್ಷರನ ಪ್ರಸಿದ್ಧ ಕಂದಾಯ ಮಂತ್ರಿ – ರಾಜಾಥೋಡರಮಲ್ಲ
  • ಅಕ್ಷರ ಫಲವತ್ತತೆಗೆ ಅನುಗುಣವಾಗಿ ಕಂದಾಯವನ್ನು ನಿಗದಿಪಡಿಸಿದನು.
    * ಪೋಲಾಜ್ – ನಿರಂತರ ಬೇಸಾಯಕ್ಕೆ ಒಳಪಡುವ ಭೂಮಿ, * ಪತಿ-ಒಂದು ವರ್ಷ ಅಂತರ ಬಿಟ್ಟು ಬೆಳೆಯುವ ಭೂಮಿ
    * ಚಚಾರ್ – 3/4 ವರ್ಷ ಅಂತರಬಿಟ್ಟು ಬೆಳೆಯುವ ಭೂಮಿ
    * ಬಂಜರ್ – 5 ವರ್ಷಗಳಿಗೊಮ್ಮೆ ಬೆಳೆಯುವ ಭೂಮಿ
  • ಅಕ್ಷರ ಮನ್ಸಬದಾರಿ ಪದ್ಧತಿಯನ್ನು ಜಾರಿಗೆ ತಂದನು. 
  • ಅಕ್ಟರ್ ಆರೋಖದರ್ಶನ ಪದ್ಧತಿಯನ್ನು ಅನುಸರಿಸಿದನು.

ಸಾಂಸ್ಕೃತಿಕ ಕೊಡುಗೆಗಳು :

  • ಅಕ್ಷರನ ಕನಸಿನ ನಗರ- ಪತ್ತೆಪರ ಸಿಕ್ಕಿ ನಿರ್ಮಿಸಿದನು, ಇದನ್ನು ಶಿಲೆಯಲ್ಲಿನ ಶೃಂಗಾರ ವೆಂದು ವಿ.ಎಸ್.ಸ್ಟೀತ್ ವರ್ಣಿಸಿ
  •  ಪತ್ತೇಪುರ ಸಿಕ್ರಿಯಲ್ಲಿ ಇಬಾದತ್ ಖಾನಾ, ಬುಲಂದಾ ದುರ್ವಾಜಾ, ಜಹಾಂಗೀರ ಮಹಲ್, ಬೀರಬಲ್ ಹೌಸ್, ಜೋಧಾಬಾಯಿ ಅರಮನೆ, ಪಂಚ ಮಹಲ್, ಜಾಮೀ ಮಸೀದಿಗಳನ್ನು ನಿರ್ಮಿಸಿದನು
  • ಅಕ್ಟರ್‌ನು ಆಗ್ರಾದಲ್ಲಿ ಕೋಟೆ ಯನ್ನು ನಿರ್ಮಿಸಿದನು.

⏩ಮೊಘಲರ ಸಾಹಿತ್ಯ :

  • ಅಕ್ಷರನ ಆಸ್ಥಾನದಲ್ಲಿ ಅಬುಲ್‌ಫಜಲ್ ಮತ್ತು ಅಬುಲ್‌ಪೈಜಿ ಎಂಬ ಸಾಹಿತಿಗಳಿದ್ದರು
    * ಅಬುಲ್ ಫಜಲ್- ಐನಿ ಅಕ್ಷರಿ, ಅಕ್ಷರ ನಾಮಾ
    * ಅಬುಲ್ ಫೈಜಿ – ಲೀಲಾವತಿ
    * ನಿಜಾಮುದ್ದೀನ ಅಹ್ಮದ್‌ ತಬಕತ್‌-ಇ-ಅಕ್ಟರಿ
    * ಫೀರ್ದೋಷಿ- ಷಾ ನಾಮ
    * ತುಳಸಿದಾಸ- ರಾಮಚರಿತ ಮಾನಸ
  • ಕ್ರಿ.ಶ. 1572ರಲ್ಲಿ ಗುಜರಾತದ ಮೇಲೆ ದಾಳಿ ಮಾಡಿ ಮುಜಾಫರ ಖಾನ್ ನೊಬೆಲ್‌ರನ್ನು ಸೋಲಿಸಿ, ಫತ್ತೇಪುರ ಸಿಕ್ರಿಯಲ್ಲಿ ಬುಲಂದಾ ದರ್ವಾಜ ನಿರ್ಮಿಸಿದನು.
  • ಕ್ರಿ.ಶ. 1581 ರಲ್ಲಿ ಕಾಬೂಲದ ಮೇಲೆ ದಾಳಿ ಮಾಡಿ ಮಿರ್ಜಾ ಮತ್ತು ಮಹದನನ್ನು ಸೋಲಿಸಿದನು.
  • ಕ್ರಿ.ಶ-1586 ರಲ್ಲಿ ಕಾಶ್ಮೀರದ ಮೇಲೆ ಯೂಸೂಫ್‌ಖಾನನ್ನು ಸೋಲಿಸಿದನು. ದಾಳಿ ಮಾಡಿ
  • ಕ್ರಿ.ಶ- 1595 ರಲ್ಲಿ ಅಹ್ಮದ ನಗರದ ರಾಜಕುಮಾರಿ ಚಾಂದಬೀಬಿ ಅಕ್ಟರನೊಂದಿಗೆ ಹೋರಾಟ ಮಾಡಿದಳು. •
  • 1576ರಲ್ಲಿ ಅಕ್ಟರನ ದಂಡನಾಯಕ ಮಾನಸಿಂಗ ಮತ್ತು ಮೇವಾರದ ಅರಸ ರಾಣಾ ಪ್ರತಾಪಸಿಂಹನ ಮಧ್ಯೆ ಹಲ್ಲಿಘಾಟ ಕದನ ನಡೆಯಿತು, ರಾಣಾ ಪ್ರತಾಪಸಿಂಹನ ಸೋತನು.

⏩ಅಕ್ಷರನ ಧಾರ್ಮಿಕ ನೀತಿ

  • ಕ್ರಿ.ಶ. 1562 ರಲ್ಲಿ ಅಕ್ಷರ ಗುಲಾಮಗಿರಿಯನ್ನು ನಿಲ್ಲಿಸಿದನು.
  •  ಕ್ರಿ.ಶ.-1563 ರಲ್ಲಿ ತೀರ್ಥಯಾತ್ರೆ ಕಂದಾಯ ರದ್ದು ಮಾಡಿದನು.
  • ಕ್ರಿ.ಶ.-1564 ರಲ್ಲಿ ಜಿಜಿಯಾ ಕಂದಾಯ ಪದ್ಧತಿಯನ್ನು ರದ್ದು ಮಾಡಿದನು
  • ಕ್ರಿ.ಶ. 1575 ರಲ್ಲಿ ಫತ್ತೇಪುರ ಸಿಕ್ಕಿಯಲ್ಲಿ ‘ಇಬಾದತ್ ಖಾನ್’ ಎಂಬ ಪ್ರಾರ್ಥನಾ ಮಂದಿರ ನಿರ್ಮಿಸಿದನು.
  • ಕ್ರಿ.ಶ.-1579 ರಲ್ಲಿ ಅನುಲಂಘನೀಯ ಶಾಸನವನ್ನು ಜಾರಿಗೆ ತಂದ.
  • ಕ್ರಿ.ಶ. 1582 ರಲ್ಲಿ ಹೊಸಪಂಥ ದೀನ್ – ಇಲಾಹಿ ಆರಂಭಿ ಸಿದನು. ಈ ಪಂಥಕ್ಕೆ ಸೇರಿದ ಏಕೈಕ ಹಿಂದೂ- ಬಿರಬಲ್ಲ.
  • ಅಕ್ಟರನ ಆಹ್ವಾನದ ಪ್ರಸಿದ್ಧ ಸಂಗೀತಗಾರ-ತಾನಸೇನ. ತಾನಸೇನನ ಮೂಲ ಹೆಸರು – ರಾಮಲು ಪಾಂಡೆ.
  • ಕ್ರಿ.ಶ. 1605 ರಲ್ಲಿ ಅಕ್ವರ ಮರಣ ಹೊಂದಿದನು. ಈತನ ಸಮಾಧಿ – ದೆಹಲಿಯಲ್ಲಿದೆ.

23) ಜಹಾಂಗೀರ (ಕ್ರಿ.ಶ.-1605-1627):

  • ಜಹಾಂಗೀರ ಆಗಸ್ಟ್ 30, 1569 ರಲ್ಲಿ ಜನಿಸಿದನು.
  • ಸೂಫಿ ಧರ್ಮ ಗುರು ಶೇಖ್‌ ಸಲೀಂ ಚಿಸ್ತಿಯ ಅನುಗ್ರಹ ದಿಂದ ಹುಟ್ಟಿದ ಮಗುವಿಗೆ ಹೆಸರಿಡಲಾಯಿತು. ಮೊಹ್ಮದ ಸಲೀಂ ಎಂದ
  • ಈತನು ಕ್ರಿ.ಶ. 1605 ರಲ್ಲಿ ತಂದೆಯ ಮರಣಾನಂತರ ಅಧಿಕಾರಕ್ಕೆ ಬಂದನು.
  • ಈತ ತಂದೆಯಂತೆ ಉದಾರ ವಾದಿ ಎನಿಸಿಕೊಳ್ಳಲು ಯುಮುನಾ ನದಿಯ ದಂಡೆಯ ಮೇಲೆ ನ್ಯಾಯದ ಗಂಟೆಯನ್ನು ನಿರ್ಮಿಸಿದನು.
  • ಕ್ರಿ.ಶ.-1606 ರಲ್ಲಿ ಮಗ ಖುಸ್ರು ದಂಗೆ ಎದ್ದ ಕಾರಣ ಆತನನ್ನು ಬಂಧಿಸಿ ಕಣ್ಣುಗಳನ್ನು ಕೀಳಿಸಿ, ಕೊಲೆ ಮಾಡಿಸಿದನು.
  • ಕ್ರಿ.ಶ. 1608-09 ರಲ್ಲಿ ಬ್ರಿಟಿಷ್ ರಾಯಭಾರಿಯಾಗಿ ಕ್ಯಾಪ್ಟನ್ ವಿಲಿಯಂ ಹಾಕಿನ್ಸ್ ಜಹಾಂಗೀರನ ಆಸ್ಥಾನಕ್ಕೆ ಭೇಟಿ ನೀಡಿದನು.
  • ಕ್ರಿ.ಶ.- 1615 ರಲ್ಲಿ ಸರ್.ಥಾಮಸ್ ರೋ ಬ್ರಿಟಿಷ್ ರಾಯಭಾರಿ ಯಾಗಿ ಜಹಾಂಗೀರನಿಂದ ವಸಹಾತು ಸ್ಥಾಪಿಸಲು ಅನುಮತಿ ಪಡೆದನು.
  • ಕ್ರಿ.ಶ. 1615ರಲ್ಲಿ ಜಹಾಂಗೀರ ಮೇವಾರದ ಅರಸ ಅಮರ ಸಿಂಹನನ್ನು ಸೋಲಿಸಿದನು.
  • ಈತನು ಕ್ರಿ.ಶ.1611ರಲ್ಲಿ ನವರೋಜ ಉತ್ಸವದಲ್ಲಿ ನೂರ್‌ಜಹಾನ್ ಗಳನ್ನು ಕಂಡು ಆಕೆಯ ರೂಪಲಾವಣ್ಯಕ್ಕೆ ಬೆರಗಾಗಿ ಅವಳನ್ನು ವಿವಾಹವಾದನು. ಇವಳ ಮೊದಲ ಹೆಸರು – ಮೆಹರುನ್ನಿಸಾ.
  • ನೂರಜಹಾನ್ ಜಹಾಂಗೀರ್ ಪ್ರೀತಿಯಿಂದ ‘ನೂರಮಹಲ್’ (ಅರಮನೆಯ ಜ್ಯೋತಿ) ನಂತರ ನೂರಜಹಾನ್ (ವಿಶ್ವಜ್ಯೋತಿ) ಎಂದು ಕರೆದರು.
  • ಕ್ರಿ.ಶ. 1613ರಲ್ಲಿ ನೂರಜಹಾನ್‌ಗಳಿಗೆ ‘ಬಾದಶಹ ಬೇಗಂ’ ಎಂಬ ಬಿರುದನ್ನು ನೀಡಿದನು.
  • ಕ್ರಿ.ಶ.1611-22ರ ವರೆಗೆ ಆಡಳಿತದಲ್ಲಿ ನೂರಜಜಹಾನಳ ಪ್ರಭಾವ ಭಾರಿ ಪ್ರಮಾಣದಲ್ಲಿತ್ತು.
  • ಜಹಾಂಗೀರ ಕ್ರಿ.ಶ. 1606 ಸಿಖ್ ಧರ್ಮಗುರು ಗುರು ಅರ್ಜುನ ದೇವನನ್ನು ಹತ್ಯೆಗೈದನು.
  • ಜಹಾಂಗೀರ ವರ್ಣ ಚಿತ್ರಕಲೆಗೆ ಅಪಾರವಾದ ಪ್ರೋತ್ಸಾವನ್ನು ನೀಡಿದ್ದನು. ಹೀಗಾಗಿ ಈತನನ್ನು ವರ್ಣಚಿತ್ರಕಲೆಯ ಸುವರ್ಣ ಯುಗದ ನಿರ್ಮಾಪಕ ಎಂದು ಕರೆಯಲಾಗುತ್ತದೆ.
  • ಜಹಾಂಗೀರನ ಗುರು – ಖಾನ್ ಅಬ್ದುಲ್ ರಹೀಮ್ ಖಾನಾ
  • ಜಹಾಂಗೀರ ಪರ್ಷಿಯನ್ ಭಾಷೆಯನ್ನು ಪರಿಣಿತಿಯನ್ನು ಹೊಂದಿದ್ದನು. ಈತ ಪರ್ಷಿಯನ್ ಭಾಷೆಯನಲ್ಲಿ ತನ್ನ ಆತ್ಮ ಚರಿತ್ರೆ- ತುಜಕ್-ಇ-ಜಹಾಂಗೀರ್(ಜಹಾಂಗೀರ್ ನಾಮಾ) ಎಂಬ ಕೃತಿಯನ್ನು ರಚಿಸಿದನು.
  • ಜಹಾಂಗೀರ್ ಕಾಶ್ಮೀರದಲ್ಲಿ ‘ಶಾಲೀಮರ್’ ಉದ್ಯಾನವನ್ನು ನಿರ್ಮಿಸಿದನು
  • ಜಹಾಂಗೀರ ಕ್ರಿ.ಶ. 1627 ರಲ್ಲಿ ಅನಾರೋಗ್ಯದ ಕಾರಣದಿಂದ ಮರಣ ಹೊಂದಿದನು.
  • ಈತನ ಸಮಾಧಿ ಲಾಹೋರದ ಸಮೀಪ ಶಾದರ್‌ನಲ್ಲಿದೆ.

24) ಷಾಹಜಹಾನ್ (ಕ್ರಿ.ಶ..-1628-58)

  • ಷಾಹಜಹಾನ್ ಜಹಾಂಗೀರನ ಮೂರನೇ ಮಗನಾಗಿ ಜನವರಿ 5,1592 ರಲ್ಲಿ ಲಾಹೋರನಲ್ಲಿ ಜನಿಸಿದನು. 
  • ಈತನ ಮೂಲ ಹೆಸರು –
  • ಈತನು ಕ್ರಿ.ಶ. 1628 ರಲ್ಲಿ ಆಗ್ರಾ ದಲ್ಲಿ ತನ್ನನ್ನು ಮೊಘಲ್ ಬಾದಾಶಹಾ ಎಂದು ಘೋಷಿಸಿ ಕೊಂಡನು.
  • ಷಾಹಜಹಾನ್ ತನ್ನ ಮಾವನಾದ ಅಸಫಖಾನನ್ನು ವಜೀರ ಹುದ್ದೆಗೆ ನೇಮಕ ಮಾಡಿದನು.
  • ನೂರಜಹಾನ್‌ಳಿಗೆ ವಾರ್ಷಿಕ ವೇತನವನ್ನಾಗಿ 2ಲಕ್ಷ ರೂ.ಗಳನ್ನು ಘೋಷಿಸಿದನು.
  • ಕ್ರಿ.ಶ-1628-29ಬುಂದೇಲಖಂಡದ ಜುಜ್‌ಹರ್‌ಸಿಂಗ್‌ನ ದಂಗೆಯನ್ನು ಅಡಗಿಸಿದನು.
  • ಕ್ರಿ.ಶ 1631 ರಲ್ಲಿ ಖಾನ್ ಜಹಾನ್‌ಲೋದಿಯ ದಂಗೆಯನ್ನು ಅಡಗಿಸಿದನು.
  • ಕ್ರಿ.ಶ. 1632 ರಲ್ಲಿ ಗುಜರಾತದ ಡೆಕ್ಕನ್ ಭಾಗದಲ್ಲಿ ಭೀಕರ ಬರಗಾಲವಿದ್ದ ಕಾರಣ ಪರಿಹಾರವನ್ನು ಒದಗಿಸಿದನು.
  • ಕ್ರಿ.ಶ.1638-39 ರಲ್ಲಿ ಪರ್ಷಿಯಾದ ಅಲಿವರ್ಧಭಾನ್‌ನಿಂದ ಕಂದಹಾರವನ್ನು ವಶಪಡಿಸಿಕೊಂಡನು ಹಾಗೂ ಆತನನ್ನು ಕೆಲ ಕಾಲ ಕಾಶ್ಮೀರದ ಗವರ್ನರನ್ನಾಗಿ ನೇಮಕ ಮಾಡಿದನು.
  • ಕ್ರಿ.ಶ. 1646 ರಲ್ಲಿ ಷಾಹಜಹಾನ್ ಮಗನಾದ ಮುದ್ರಾ ಭಕ್ಷನ ನಾಯಕತ್ವದಲ್ಲಿ ಮಧ್ಯ ಏಷ್ಯಾದ ಬಲ್ಲ ಎಂಬ ಪ್ರದೇಶವನ್ನು ವಶಪಡಿಸಿಕೊಂಡನು.
  • ಕ್ರಿ.ಶ. 1649 ಈತ ಕಂದಹಾರವನ್ನು ಕಳೆದುಕೊಂಡನು. ಇದನ್ನು ಪಡೆಯುವುದಕ್ಕಾಗಿ 1649-52-53 ರಲ್ಲಿ 3 ಬಾರಿ ಪ್ರಯತ್ನ ಮಾಡಿ 12 ಕೋಟಿ ರೂ. ನಷ್ಟವನ್ನು ಅನುಭವಿಸಿದನು.
  • ಈತನ ಕಾಲದಲ್ಲಿ ದೆಹಲಿಯಲ್ಲಿ ಒಂದು ಭಾಗಕ್ಕೆ ಷಾಹಜಹಾನ್ ಬಾದ್ ಎಂದು ಕರೆಯುತ್ತಿದ್ದರು. 
  • ಷಾಹಜಹಾನ್ ದೆಹಲಿಯಲ್ಲಿ ಕೆಂಪುಕೋಟೆ, ದಿವಾನ್‌-ಇ ಆಮ್, ದಿವಾನ್-ಇ-ಖಾಸ್, ರಂಗಿನ ಮಹಲ್, ಮೊತಿ ಮಹಲ್‌, ಹೀರಾ ಮಹಲ್’ ಎಂಬ ಕಟ್ಟಡಗಳನ್ನು ನಿರ್ಮಿಸಿದನು.
  • ಷಾಹಜಹಾನ್ ದೆಹಲಿಯಲ್ಲಿ ಭಾರತ ದೇಶದ ಅತೀ ದೊಡ್ಡ ಮಸೀದಿಯನ್ನು ‘ಜಾಮೀ ಮಸೀದಿ’ ಯನ್ನು ಕಟ್ಟಿಸಿದನು.
  • ಅಂದಿನ ಕಾಲದಲ್ಲಿ 7 ವರ್ಷಗಳ ಕಾಲ ಸುಂದರ ಕೆತ್ತನೆಯನ್ನು ಒಳಗೊಂಡ ವಜ್ರರತ್ನ ಖಚಿತ ಮಯೂರ ಸಿಂಹಾಸನವನ್ನು ಈತನ ಕೊಡೆಯಾಗಿತ್ತು.
  • ಷಾಹಜಹಾನ್‌ನ ಕಾಲವನ್ನು ‘ಮೊಘಲರ ಸುವರ್ಣ ಯುಗ’ ಎಂದು ಕರೆಯಲಾಗಿದೆ.
  • ಷಾಹಜಹಾನ್‌ನ್ನು ಮಧ್ಯಯುಗೀನ ಭಾರತದ ಇತಿಹಾಸದಲ್ಲಿ ‘ಸೌಧಗಳ ನಿರ್ಮಾಪಕ ರಾಜ’ ಎಂದು ಕರೆಯುತ್ತಾರೆ.
  • ಷಹಜಾನ್ ತನ್ನ ಪ್ರೀತಿಯ ಮಡದಿ ಮುಮತಾಜ್‌ ಮಹಲ್‌ ನೆನಪಿಗಾಗಿ ಯುಮುನಾ ನದಿಯ ದಂಡೆಯ ಮೇಲೆ ಅಮೃತ ಅಲೆಗಳಿಂದ ನಿರ್ಮ ಮಾಡಿದನು, ಇದರ ಶಿಲ್ಪಿ. ಉಸ್ತಾದ ಅಹಮದ್‌ ಲಹರಿ,
  • ಮುಮತಾಜಳ ಹೆಸರು-ಅಜೂಮನ್ ಬಾನು. ಇವಳನ್ನು ಪ್ರೀತಿಯಿಂದ ‘ಮುಮತಾಜ್ ಮಹಲ್‌’ ಎಂದು ಕರೆದರು.
  • ಈತನು ಲಾಹೋರದಲ್ಲಿ ‘ಶಾಲೀಮರ್‌ತೋಟ’ ವನ್ನು ನಿರ್ಮಿಸಿದನು.
  • ಶಹಜಹಾನ್ ಕ್ರಿ.ಶ. 1666 ರಲ್ಲಿ ಜನವರಿ 31 ಎಂದು ಮರಣ ಹೊಂದಿದನು. ಈತನ ಸಮಾಧಿ ಆಗ್ರಾದಲ್ಲಿದೆ.

25)  ಔರಂಗಜೇಬ (ಕ್ರಿ.ಶ.-1658-1707)

  • ಔರಂಗಜೇಬ ತಂದೆಯ ಆಡಳಿಸುವಧಿಯಲ್ಲಿ ದಖ್ಖನಿನ ಮುಖ್ಯಸ್ಥನಾಗಿದ್ದನು. ಕ್ರಿ.ಶ. 1658 ರಲ್ಲಿ ತಂದೆಯನ್ನು ಕಾರಾಗೃಹಕ್ಕೆ ತಳ್ಳಿ ಅಧಿಕಾರಕ್ಕೆ ಬಂದನು.
  • 1658-59 ರಲ್ಲಿ ಸಮೂಹರ ಘರ ಕದನದಲ್ಲಿ ಸಹೋದರ ದಾರಾಶೇಕೊನನ್ನು ಹತ್ಯೆಗೈದನು.
  • ಔರಂಗಜೇಬನ ಬಿರುದು – ಅಲಂಗೀರ್
  • ಕ್ರಿ.ಶ 1662 ರಲ್ಲಿ ಆಸ್ಸಾಂದ ಆಹೋಮರನನ್ನು ಸೋಲಿಸಿದನು.
  • ಕ್ರಿ.ಶ. 1669 ರಿಂದ ಕ್ರಿ.ಶ. 1672 ರ ವರೆಗಿನ ಅವಧಿಯಲ್ಲಿ ಮಥುರಾದ ರೈತ ಸಮುದಾಯ ಪಂಜಾಬದ
    ಸಿಖ್ಖರು ಹಾಗೂ ಜಾಟರ ದಂಗೆಗಳನ್ನು ಅಡಗಿಸಿದನು.
  • ಕ್ರಿ.ಶ. 1676ರಲ್ಲಿ ಬಿಜಾಪುರದ ಆದಿಲಶಾಹಿ ಆಡಳಿತ ಕೊನೆಗಾಣಿಸಿದನು.
  • ಕ್ರಿ.ಶ.1687 ರಲ್ಲಿ ಗೋಲ್ಕಂಡ ವಶಪಡಿಸಿಕೊಂಡನು. 
  • ಔರಂಗಜೇಬ್‌ನು ಹಿಂದೂ ವಿರೋಧ ನೀತಿಯನ್ನು ಅನುಸರಿಸಿದ್ದನು. ಹಿಂದೂ ದೇವಾಲಯಗಳನ್ನು ನಾಶ ಮಾಡಿದನು.
  • ಹಿಂದೂ ಪದ್ಧತಿಯಂತೆ ನಮಸ್ಕಾರ ಮಾಡುವುದು, ತುಲಾಭಾರ ವ್ಯವಸ್ಥೆಯನ್ನು ರದ್ದು ಮಾಡಿದನು.
  • ಕ್ರಿ.ಶ.1668ರಲ್ಲಿ ಹೊಳಿ, ದೀಪಾವಳಿ ಹಬ್ಬಗಳನ್ನು ನಿಷೇಧಿಸಿದನು.
  • ಕ್ರಿ.ಶ.1675 ರಲ್ಲಿ ಸಿಖ್‌ರ 9ನೇ ಗುರು ತೇಜ್‌ಬಹದ್ದೂರನನ್ನು ಹತ್ಯೆಗೈದನು.
  • ಈತನು ನವರೋಜಿ ಉತ್ಸವ ಆಚರಿಸುವುದನ್ನು ರದುಪಡಿಸಿದನು.
  • ಕ್ರಿಶ. 1679ರಲ್ಲಿ ಹಿಂದೂಗಳ ಮೇಲೆ ವಿಧಿಸುವ ಜೆಜಿಯಾ ಕಂದಾಯ ಪದ್ಧರಿಯನ್ನು ಪುನಃ ಜಾರಿಗೆ ತಂದನು.
  • ಈತನು ಜರೋಖ್ ದರ್ಶನ ರದ್ದು ಪಡಿಸಿದನು.
  • ಔರಂಗಜೇಬನಿಗೆ ‘ಜಿಂದಾಪೀರ’ (ಸಜೀವ ಸಂತ) ಎಂಬ ಬಿರುದು ಹೊಂದಿದ್ದನು.
  • ಕ್ರಿ.ಶ. 1707 ರಲ್ಲಿ ಔರಂಗಜೇಬ ಮರಣ ಹೊಂದಿದನು. 
  • ಈತನ ಸಮಾಧಿ ದೌಲತಾಬಾದ್‌ನಲ್ಲಿದೆ.